ಬೆಂಗಳೂರು: ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರ ನಿವಾಸದಲ್ಲಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಕಳೆದ ಡಿಸೆಂಬರ್ 31ರಂದು ಮಧ್ಯಾಹ್ನ ತಮ್ಮ ರೂಂನ ಬೀರುವಿನಲ್ಲಿ 2.50 ಲಕ್ಷ ರೂ. ಇಟ್ಟಿದ್ದರು. ಜನವರಿ 5ರಂದು ಈ ಹಣ ಕಳ್ಳತನವಾಗಿದೆ. ಎರಡು ದಿನ ಮನೆಯೆಲ್ಲ ಹುಡುಕಾಡಿದರೂ ಹಣ ಸಿಕ್ಕಿಲ್ಲ.
ಜನವರಿ 7ರಂದು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುರುಕಿರಣ್ ಅತ್ತೆ ಕಳ್ಳತನವಾದ ಕುರಿತು ದೂರು ನೀಡಿದ್ದಾರೆ. ಮನೆ ಕೆಲಸದವರ ಮೇಲೆ ಕಸ್ತೂರಿ ಶೆಟ್ಟಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮನೆ ಕೆಲಸದಾಕೆ ರತ್ನಮ್ಮ ಎಂಬವರನ್ನು ವಿಚಾರಣೆ ನಡೆಸಿರುವ ಚಂದ್ರಲೇಔಟ್ ಪೊಲೀಸರು ಮುಂದಿನ ಕ್ರಮಕೂಗೊಂಡಿದ್ದಾರೆ.