ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ಮಾರ್ಗಗಳಲ್ಲಿ ಹವಾನಿಯಂತ್ರಿತ ವಾಯುವಜ್ರ ಸೇವೆಯನ್ನು ಪುನರಾರಂಭ ಮಾಡಿದೆ
ಮಾರ್ಗ ಸಂಖ್ಯೆ ಕೆಐಎ-7 ಹೆಚ್.ಎಸ್.ಆರ್. ಬಿಡಿಎ ಕಾಂಪ್ಲೆಕ್ಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋರಮಂಗಲ ವಾಟರ್ ಟ್ಯಾಂಕ್, ಡೈರಿ ಸರ್ಕಲ್, ಶಾಂತಿನಗರ ಟಿ.ಟಿ.ಎಂ.ಸಿ, ಇಂಡಿಯನ್ ಎಕ್ಸ್ಪ್ರೆಸ್ ಮಾರ್ಗವಾಗಿ ಮತ್ತು ಮಾರ್ಗ ಸಂಖ್ಯೆ ಕೆಐಎ-12 ಕುವೆಂಪು ನಗರ ಬಸ್ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜೆ.ಪಿ.ನಗರ 3ನೇ ಹಂತ, ಜಯನಗರ 4ನೇ ಬ್ಲಾಕ್, ಶಾಂತಿನಗರ ಟಿ.ಟಿ.ಎಂ.ಸಿ, ಕಾವೇರಿ ಭವನ ಮಾರ್ಗವಾಗಿ ತಲಾ 03 ಹವಾನಿಯಂತ್ರಿತ ವಾಯುವಜ್ರ ಸಾರಿಗೆಗಳು ಸಂಚಾರವನ್ನು ಪುನರಾರಂಭಿಸಿದ್ದು, ಪ್ರಯಾಣಿಕರು ಸೌಲಭ್ಯವನ್ನು ಸದುಪಯೋಗಿಸಿಕೊಳ್ಳುವಂತೆ ಕೋರಿದ್ದಾರೆ.