ಬೆಂಗಳೂರು: ಸ್ವಂತ ಭಾಮೈದುನನ್ನೆ ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ವೆಂಕಟೇಶಪುರದಲ್ಲಿ ನಡೆದಿದೆ. ಕಿರಣ್ ಕುಮಾರ್ (32) ಕೊಲೆಯಾದ ವ್ಯಕ್ತಿ.
ಭಾವ ಲಕ್ಷ್ಮಣ ಎನ್ನುವಾತ ಬೆನ್ನಿಗೆ ಚಾಕು ಇರಿದು ಭಾಮೈದ ಕಿರಣ್ ಕುಮಾರ್ ಅವರನ್ನು ಹತ್ಯೆಗೈದಿದ್ದಾನೆ. ಲಕ್ಷಣ ಮತ್ತು ಆತನ ಪತ್ನಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು ಈ ಸಂಬಂಧ ಭಾವ ಮತ್ತು ಭಾಮೈದನ ನಡುವೆ ಮಾತುಕತೆ ನಡೆದು ನಂತರ ಅದು ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ಲಕ್ಷಣ ಕಿರಣ್ಗೆ ಹಿಂಬದಿಯಿಂದ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಿರಣ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಲಕ್ಷ್ಮಣ್ ಸಾವನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.