ಬೆಂಗಳೂರು: ಮದುವೆ ಆಗಲು ನಿರಾಕರಿಸಿದ ಪ್ರಿಯತಮೆಯನ್ನು 25 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಅಲ್ಲದೇ ತಾನೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.ಫರಿದಾ ಖಾತೂನ್ ಕೊಲೆಯಾದ ಮಹಿಳೆ. ಗಿರೀಶ್ ಅಲಿಯಾಸ್ ರೆಹಾನ್ ಕೊಲೆ ಮಾಡಿದ ಆರೋಪಿ.
ಬೆಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡ್ತಿದ್ದ 42 ವರ್ಷದ ಫರಿದಾ ಗಂಡನಿಗೆ ಡಿವೋರ್ಸ್ ಕೊಟ್ಟು ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿ ಹೊಸ ಜೀವನ ಕಟ್ಟಿಕೊಂಡಿದ್ದಳು. ಫರಿದಾಗೆ 22 ವರ್ಷದ ಮಗಳು ಕೂಡ ಇದ್ದಾಳೆ.ಬೆಂಗಳೂರು ಯಡಿಯೂರು ನಿವಾಸಿಯಾಗಿರುವ 32 ವರ್ಷದ ಗಿರೀಶ್ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಒಮ್ಮೆ ಮಸಾಜ್ ಮಾಡಿಸಿಕೊಳ್ಳಲು ಸ್ಪಾಗೆ ಹೋದಾಗ ಫರಿದಾ ಪರಿಚಯವಾಗಿತ್ತು. 2022ರಲ್ಲಿ ಗಿರೀಶ್ ಹಾಗೂ ಫರಿದಾಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅಂದಿನಿಂದ ಫರಿದಾ ಜೊತೆಗೆ ಗಿರೀಶ್ ಸಂಪರ್ಕ ಬೆಳೆಸಿದ್ದ. ಅಲ್ಲದೆ ಇವರ ನಡುವೆ ದೈಹಿಕ ಸಂಪರ್ಕ ಸಹ ಆಗಿತ್ತು.
ಕೊಲ್ಕತ್ತಾದಲ್ಲಿದ್ದಾಗ ಗಿರೀಶ್ ಗೆ ಸುಳ್ಳು ಹೇಳಿ ಫರಿದಾ ಬೇರೆ ಕಡೆ ಹೋಗಿದ್ದಳು.
ಸ್ನೇಹಿತೆ ಜೊತೆಗೆ ಬೇರೆ ಕೆಲಸಕ್ಕೆ ತೆರಳಿದ್ದಳು. ಈ ವಿಚಾರವಾಗಿ ಫರಿದಾ ಸ್ನೇಹಿತೆ ಗಂಡನಿಗೆ ಕರೆ ಮಾಡಿ ಗಿರೀಶ್ ಬೈದಿದ್ದ. ಫರಿದಾಳನ್ನ ನಿನ್ನ ಪತ್ನಿ ಹಾಳು ಮಾಡ್ತಿದ್ದಾಳೆ ಎಂದು ಕೋಪಗೊಂಡಿದ್ದ ಮಾರ್ಚ್ 30 ರಂದು ಕೂಡ ಫರಿದಾಳನ್ನು ಕರೆದುಕೊಂಡು ಶಾಲಿನಿ ಗ್ರೌಂಡ್ ಗೆ ಬಂದಿದ್ದ. ಆಕೆಯನ್ನ ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಚಾಕು ಖರೀದಿಸಿದ್ದ. ನಾವು ಮದುವೆ ಆಗೋಣ, ಈ ಕೆಲಸ ಎಲ್ಲಾ ಬಿಡು ಎಂದು ಮನವಿ ಮಾಡಿದ್ದ. ಆದರೆ ಫರಿದಾ ಇದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೆ ದೇಹದ ವಿವಿಧೆಡೆ 25ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ನಂತರ ತಾನೆ ಬಂದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.