ಬೆಂಗಳೂರು: ನಾಳೆಯಿಂದ ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗುವುದರ ಜೊತೆಗೆ ಒಪ್ಪಂದದ ಬಸ್ ದರ ಪರಿಷ್ಕರಣೆಯಲ್ಲೂ ಸರ್ಕಾರ ನಿರ್ಣಯ ಕೈಗೊಂಡಿದೆ.
ಸರ್ಕಾರ ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಲಾಗಿತ್ತು. ಅದರಂತೆಯೇ ಸಿಎಂ ಸಿದ್ದರಾಮಯ್ಯನವರು ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನಲೆ ನಾಳೆಯಿಂದ ಅಧಿಕೃತವಾಗಿ ಪ್ರತಿ ಲೀಟರ್ ಹಾಲಿನ ಮೇಲೆ 3 ರೂಪಾಯಿ ಹೆಚ್ಚಳವಾಗಲಿದೆ.
ಸಮೃದ್ದಿ ಹಾಲು 48 ರಿಂದ 51., ಸ್ಪೆಷಲ್ ಹಾಲು 43 ರಿಂದ 46., ಸಂತೃಪ್ತಿ ಹಾಲು 50 ರಿಂದ 53., ಶುಭಂ ಹಾಲು 43 ರಿಂದ 46., ಟೋನ್ಡ್ ಹಾಲು 37 ರಿಂದ 40ರೂ. ಹೆಚ್ಚಳವಾಗಲಿದೆ.
ಶಕ್ತಿ ಯೋಜನೆಯ ಎಫೆಕ್ಟ್ ಆದಾಯದ ಮೂಲ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್ ಮಾಡಿದೆ. ಹೀಗಾಗಿ ಕರ್ನಾಟಕ ಸಾರಿಗೆ , ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್ ಗಳ ದರ 3ರೂಪಾಯಿ ಹೆಚ್ಚಳ ಮಾಡಿ ಪರಿಷ್ಕರಿಸುತ್ತಿದೆ. ರಾಜಹಂಸ, ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್, ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯೂಟಿವ್, ಮಿಡಿ ಬಸ್,ನಾನ್ ಎಸಿ ಸ್ಲೀಪರ್ ಬಸ್ ಗಳ ದರ ಪರಿಷ್ಕರಿಸುತ್ತಿದೆ.