ಬೆಂಗಳೂರು: ಜನರಿಂದ 50 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಹ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಆರೋಪಿ ಪ್ರತಾಪ್ ಸಿಂಹ ಅಂಧರ, ವೃದ್ಧರ ಮತ್ತು ಅಂಗವಿಕಲರನ್ನು ಪೋಷಿಸುವ ಎನ್ಜಿಓಗಳಿಗೆ ಭೇಟಿ ನೀಡಿ, ನಿಮಗೆ ಸರ್ಕಾರದಿಂದ ಸಿಎಸ್ಆರ್ ಫಂಡ್ ಕೊಡಿಸುತ್ತೇನೆಂದು ವಂಚಿಸಿದ್ದಾನೆ. ಅಷ್ಟು ಮಾತ್ರವಲ್ಲದೆ ಸರ್ಕಾರದಿಂದ ಲ್ಯಾಪ್ ಟ್ಯಾಪ್ ಕೊಡಿಸುತ್ತೇನೆ ಎಂದು ಸಾಮಾನ್ಯ ಜನರಿಂದ ಹಣ ಪಡೆದಿದ್ದಾನೆ.
ನಿಮ್ಮ ಬೆಳೆಗಳಿಗೆ ಹೆಚ್ಚಿನ ಲಾಭಾಂಶ ಕೊಡಿಸುತ್ತೇನೆ, ಸರ್ಕಾರದಿಂದ ಸಬ್ಸಿಡಿ ಕೊಡಿಸುತ್ತೇನೆ. ಎಳನೀರು ಹೊರರಾಜ್ಯಗಳಿಗೆ ಮಾರಾಟ ಮಾಡಿಸುತ್ತೇನೆ ಎಂದು ಮಂಡ್ಯ, ಮೈಸೂರು ಮತ್ತು ತುಮಕೂರು ಭಾಗದ ರೈತರಿಂದ ಕೂಡಾ ಹಣ ಪಡೆದಿದ್ದನು.
ಈತ ದೆಹಲಿ, ಲಕ್ನೋ, ಆಗ್ರಾ, ಹಿಮಾಚಲ ಪ್ರದೇಶ ವ್ಯಾಪಾರಿಗಳಿಗೆ ವಿವಿಧ ಆಸೆ ತೋರಿಸಿ ಹಣ ಪಡೆದು ವಂಚಿಸಿದ್ದಾನೆ. ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ವಿಶೇಷ ವಿಚಾರಣಾ ದಳ ಕಾರ್ಯಾಚರಣೆ ಈತನನ್ನು ಬಂಧಿಸಿದ್ದಾರೆ.