ಕೋಲಾರ: ಮೀನು ಹಿಡಿಯುವ ವಿಚಾರವಾಗಿ ಸೋದರ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ರಾಜಿ ಪಂಚಾಯಿತಿ ಮಾಡುವ ವೇಳೆ ಚಾಕು ಇರಿದು ಯುವಕನ ಭೀಕರವಾಗಿ ಹತ್ಯೆಮಾಡಲಾಗಿದೆ. ಈ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ. ಲೋಕೇಶ್ ಮೃತ ದುರ್ದೈವಿ.
ಈ ಜಗಳದಲ್ಲಿ ಮತ್ತೋರ್ವ ದರ್ಶನ್ ಎಂಬುವವನಿಗೂ ಗಾಯಗಳಾಗಿವೆ.ಗಲಾಟೆ ಕುರಿತಂತೆ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆಯುತ್ತಿತ್ತು, ಈ ವೇಳೆ ಪ್ರಮೋದ್ ಲೋಕೇಶ್ ಗೆ ಚಾಕು ಇರಿದು ಭೀಕರವಾಗಿ ಗಾಯಗೋಳಿಸಿದ್ದಾನೆ. ತಕ್ಷಣ ಲೋಕೇಶ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಗಾಯಾಳು ಲೋಕೇಶ್ ಸಾವನಪ್ಪಿದ್ದಾನೆ.
ಮತ್ತೊಬ್ಬ ಗಾಯಾಳು ದರ್ಶನಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.