News Karnataka Kannada
Thursday, May 02 2024
ಬೆಂಗಳೂರು

ನಾಳೆ ಕರ್ನಾಟಕ ಬಂದ್​​: ರಸ್ತೆಗಿಳಿಯಲ್ಲ 40 ಸಾವಿರ ಓಲಾ-ಉಬರ್ ಕ್ಯಾಬ್​ಗಳು

Karnataka bandh: 40,000 Ola-Uber cabs to ply on roads tomorrow
Photo Credit : News Kannada

ಬೆಂಗಳೂರು: ಈಗಾಗಲೇ ಬೆಂಗಳೂರು ಬಂದ್​ ಯಶಸ್ವಿಯಾಗಿ ನಡೆದಿದೆ. ಈಗ ಇಡೀ ರಾಜ್ಯಕ್ಕೆ ಬೀಗ ಹಾಕಲು ತಯಾರಿ ನಡೆಸಲಾಗಿದೆ. ನಾಳೆ ಶುಕ್ರವಾರ ಕರ್ನಾಟಕ ಬಂದ್​ಗೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದು ಬಹುತೇಕ ಸಂಘಟನೆಗಳು ಬಂದ್​ಗೆ ಬೇಷರತ್ತಾಗಿ ಬೆಂಬಲ ಸೂಚಿಸಿವೆ.

ಸೆಪ್ಟೆಂಬರ್​ 29 ಶುಕ್ರವಾರದಂದು ಅಖಂಡ ಕರ್ನಾಟಕ ಬಂದ್​ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಈಗಾಗಲೇ ಈ ಹೋರಾಟಕ್ಕೆ ರೂಪುರೇಷೆ ಕೂಡ ಸಿದ್ಧವಾಗಿದೆ. ಅಲ್ಲದೇ ಬಂದ್​ಗೆ ಬೆಂಬಲಿಸಿ ಅಂತ ತೆರೆದ ವಾಹನದಲ್ಲಿ ಪ್ರಚಾರ ಮಾಡಿದ್ದಾರೆ.

ಇನ್ನು ರಾಜ್ಯ ಬಂದ್​ಗೆ ಓಲಾ-ಉಬರ್ ಅಸೋಸಿಯೇಷನ್ ಬೆಂಬಲ ಕೊಟ್ಟಿದೆ. ಹೀಗಾಗಿ ಶುಕ್ರವಾರ 40 ಸಾವಿರ ಓಲಾ-ಉಬರ್ ಕ್ಯಾಬ್​ಗಳು ರಸ್ತೆಗಳಿಯಲ್ಲ. ಚಾಲಕರು ಕ್ಯಾಬ್ ಓಡಿಸದೇ ಮನೆಯಲ್ಲಿದ್ದು ರಾಜ್ಯ ಬಂದ್​​ಗೆ ಬೆಂಬಲ ನೀಡಲಿದ್ದಾರೆ ಅಂತ ಓಲಾ-ಉಬರ್ ಚಾಲಕರ ಅಸೋಸಿಯೇಷನ್ ಸ್ಪಷ್ಟನೆ ಕೊಟ್ಟಿದೆ. ಅಲ್ಲದೆ ಬಂದ್​ಗೆ ಆದರ್ಶ್ ಆಟೋ ಯೂನಿಯನ್ ಕೂಡ ಸಂಪೂರ್ಣ ಬೆಂಬಲ ಕೊಟ್ಟಿದೆ. ಟೌನ್​ಹಾಲ್​ನಿಂದ ಹೊರಡಲಿರುವ ಪ್ರತಿಭಟನೆಯಲ್ಲಿ ಆಟೋ ಚಾಲಕರು ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟವೂ ಬಂದ್​ಗೆ ನೈತಿಕ ಬೆಂಬಲ ಘೋಷಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು