ಬೆಂಗಳೂರು: ಈಗಾಗಲೇ ಬೆಂಗಳೂರು ಬಂದ್ ಯಶಸ್ವಿಯಾಗಿ ನಡೆದಿದೆ. ಈಗ ಇಡೀ ರಾಜ್ಯಕ್ಕೆ ಬೀಗ ಹಾಕಲು ತಯಾರಿ ನಡೆಸಲಾಗಿದೆ. ನಾಳೆ ಶುಕ್ರವಾರ ಕರ್ನಾಟಕ ಬಂದ್ಗೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದು ಬಹುತೇಕ ಸಂಘಟನೆಗಳು ಬಂದ್ಗೆ ಬೇಷರತ್ತಾಗಿ ಬೆಂಬಲ ಸೂಚಿಸಿವೆ.
ಸೆಪ್ಟೆಂಬರ್ 29 ಶುಕ್ರವಾರದಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಈಗಾಗಲೇ ಈ ಹೋರಾಟಕ್ಕೆ ರೂಪುರೇಷೆ ಕೂಡ ಸಿದ್ಧವಾಗಿದೆ. ಅಲ್ಲದೇ ಬಂದ್ಗೆ ಬೆಂಬಲಿಸಿ ಅಂತ ತೆರೆದ ವಾಹನದಲ್ಲಿ ಪ್ರಚಾರ ಮಾಡಿದ್ದಾರೆ.
ಇನ್ನು ರಾಜ್ಯ ಬಂದ್ಗೆ ಓಲಾ-ಉಬರ್ ಅಸೋಸಿಯೇಷನ್ ಬೆಂಬಲ ಕೊಟ್ಟಿದೆ. ಹೀಗಾಗಿ ಶುಕ್ರವಾರ 40 ಸಾವಿರ ಓಲಾ-ಉಬರ್ ಕ್ಯಾಬ್ಗಳು ರಸ್ತೆಗಳಿಯಲ್ಲ. ಚಾಲಕರು ಕ್ಯಾಬ್ ಓಡಿಸದೇ ಮನೆಯಲ್ಲಿದ್ದು ರಾಜ್ಯ ಬಂದ್ಗೆ ಬೆಂಬಲ ನೀಡಲಿದ್ದಾರೆ ಅಂತ ಓಲಾ-ಉಬರ್ ಚಾಲಕರ ಅಸೋಸಿಯೇಷನ್ ಸ್ಪಷ್ಟನೆ ಕೊಟ್ಟಿದೆ. ಅಲ್ಲದೆ ಬಂದ್ಗೆ ಆದರ್ಶ್ ಆಟೋ ಯೂನಿಯನ್ ಕೂಡ ಸಂಪೂರ್ಣ ಬೆಂಬಲ ಕೊಟ್ಟಿದೆ. ಟೌನ್ಹಾಲ್ನಿಂದ ಹೊರಡಲಿರುವ ಪ್ರತಿಭಟನೆಯಲ್ಲಿ ಆಟೋ ಚಾಲಕರು ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟವೂ ಬಂದ್ಗೆ ನೈತಿಕ ಬೆಂಬಲ ಘೋಷಿಸಿದೆ.