ಬೆಂಗಳೂರು: ಇದು ನನ್ನ ಕೊನೆಯ ಚುನಾವಣೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ ಚುನಾವಣಾ ರಾಜಕೀಯದಲ್ಲಿ ಇರುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
2013ರಲ್ಲಿಯೇ ನನ್ನ ಕೊನೆಯ ಚುನಾವಣೆ ಆಗಬೇಕಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದ ಕಾರಣದಿಂದ ಹಿಂದೆ ಸರಿಯುವುದು ಬೇಡವೆಂದು ಸುಮ್ಮನಿದ್ದೆ. ಅಲ್ಲದೆ ಬಿಜೆಪಿ ಕೋಮು ಅಜೆಂಡಾ ಇಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ಬಿಜೆಪಿ ನಿರ್ಧಾರವನ್ನು ಸೋಲಿಸಬೇಕು ಎಂದೇ ಈ ಬಾರಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡೆ ಎಂದು ಹೇಳಿದರು.
ಇದು ನನ್ನ ಕೊನೆಯ ಚುನಾವಣೆ ಆಗಿರುವ ಕಾರಣ ಹುಟ್ಟೂರಿನಲ್ಲಿ ಸ್ಪರ್ಧಿಸಬೇಕು ಎಂಬುದು ಜನರ ಆಶಯ. ಮಗ ಯತೀಂದ್ರ ನನ್ನ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು ಎಂದು ಸಿದ್ದರಾಮಯ್ಯ ವಿವರಿಸಿದರು.