ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ದಂಪತಿಗೆ ಕರೆ ಮಾಡಿ ಹಿಂತಿರುಗಿಸುವ ಮೂಲಕ ಹೆಡ್ಕಾನ್ಸ್ ಟೇಬಲ್ ಹೆಚ್.ಸಿ ಮಲ್ಲಿಕಾರ್ಜುನ ಕರ್ತವ್ಯ ನಿಷ್ಠೆ ಮೆರೆದಿದ್ದು, ಈ ಘಟನೆ ನಗರದ ಕೋರಮಂಗಲದ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಬಸ್ನಲ್ಲಿ ಬೆಂಗಳೂರಿಗೆ ಪ್ರವೀಣ್ ಹಾಗೂ ಭಾವನಿ ದಂಪತಿ ಬಂದಿದ್ದಾರೆ. ಕೋರಮಂಗಲ ವಾಟರ್ ಟ್ಯಾಂಕ್ ಸಿಗ್ನಲ್ನಲ್ಲಿ ಬಸ್ ಇಳಿದಿದ್ದಾರೆ. ಈ ವೇಳೆ ಮನೆ ಹೋಗುವ ಆತುರದಲ್ಲಿ ಬ್ಯಾಗ್ ಬಿಟ್ಟಿದ್ದಾರೆ. ಅಲ್ಲೇ ಡ್ಯೂಟಿಯಲ್ಲಿ ಇದ್ದ ಆಡುಗೋಡಿ ಸಂಚಾರಿ ಠಾಣೆಯ ಹೆಡ್ಕಾನ್ಸ್ ಟೇಬಲ್ ಹೆಚ್ ಸಿ ಮಲ್ಲಿಕಾರ್ಜುನ ನೋಡಿದ್ದಾರೆ.
ಬಳಿಕ ಆ ಬ್ಯಾಗ್ ಓಪನ್ ಮಾಡಿ ನೋಡಿದಾಗ ಚಿನ್ನಾಭರಣ ಇರೋದು ಗೊತ್ತಾಗಿದೆ. ಅದರಲ್ಲೇ ಇದ್ದ ನಂಬರ್ಗೆ ಕರೆ ಮಾಡಿದ್ದಾರೆ. ಆ ಕರೆ ಕೊಡಗಿನ ಪ್ರವೀಣ್ ಸಂಬಂಧಿಕ ರ ನಂಬರ್ ಗೆ ಹೋಗಿದ್ದು, ಅವ್ರು ಪ್ರವೀಣ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪ್ರವೀಣ್ ಬಂದು ಚಿನ್ನಾಭರಣ ಇದ್ದ ಬ್ಯಾಗ್ ಪಡೆದುಕೊಂಡಿದ್ದಾರೆ. ಆಡುಗೋಡಿ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ.