ಬೆಂಗಳೂರು: ಚೈತ್ರಾ ಕುಂದಾಪುರ ಅವರ ಟಿಕೆಟ್ಗಾಗಿ ಕೋಟಿ, ಕೋಟಿ ವಂಚಿಸಿದ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಹಾಲಶ್ರೀ ಸ್ವಾಮೀಜಿ ಅವರನ್ನು ಬಂಧಿಸಿದ ಸಿಸಿಬಿ ಪೊಲೀಸರು ಹಣದ ಮೂಲ ಪತ್ತೆ ಹಚ್ಚುತ್ತಿದ್ದಾರೆ.
ತನಿಖೆಯಲ್ಲಿ ಹಾಲಶ್ರೀ ಮಠದಲ್ಲಿ ಕಂತೆ, ಕಂತೆ ಹಣ ತುಂಬಿರುವ ನೋಟಿನ ಬ್ಯಾಗ್ ಪತ್ತೆಯಾಗಿದೆ. ಮಠದ ಪಲ್ಲಕ್ಕಿ ಕೆಳಗೆ 500 ರೂಪಾಯಿ ಮುಖಬೆಲೆಯ 50 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಇದು ಬಿಜೆಪಿ ಟಿಕೆಟ್ಗಾಗಿ ಪಡೆದ ಹಣ ಎಂದು ಸೀಜ್ ಮಾಡಲಾಗಿದೆ.
ಕಳೆದ ವಾರದಿಂದ ಸಿಸಿಬಿ ಅಧಿಕಾರಿಗಳು ವಂಚನೆ ಪ್ರಕರಣದ ಹಣದ ಮೂಲಕ್ಕಾಗಿ ಹುಡುಕಾಟ ನಡೆಸಿದ್ದರು. ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಮಠದಲ್ಲಿ ಹುಡುಕಾಟ ನಡೆಸಿದಾಗ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.