ಬೆಂಗಳೂರು: ಆರ್ಸಿಬಿ ಫ್ಯಾನ್ಸ್ಗಳಿಗೆ ಈಗ ಮತ್ತೊಂದು ಗುಡ್ನ್ಯೂಸ್. ಈಗಷ್ಟೆ ಆರ್ಸಿಬಿ ಫ್ಯಾನ್ಸ್ಗಳು ಆರ್ಸಿಬಿ ಹೆಸರು ಬದಲಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು ಅದನ್ನು ಈಡೇರಿಸಲು ತಂಡ ಮುಂದಾಗಿದೆ ಮತ್ತು ಈ ಬೆನ್ನಲ್ಲೆ ಇನ್ನೊಂದು ಸಿಹಿ ಸುದ್ದಿ ನೀಡಿದೆ.
ಇನ್ನೇನು ಐಪಿಎಲ್ ಗೆ ಕೆಲವೇ ದಿನಗಳು ಬಾಕಿ ಇದ್ದು ಈ ಬಾರಿ ಆರ್ಸಿಬಿ ತಂಡ ಗೆಲ್ಲುವ ಭರವಸೆ ಹೊತ್ತು ಭರ್ಜರಿ ಸಿದ್ಧತೆ ನಡೆಸಿದೆ.ಆದರೂ ವಿರಾಟ್ ಇಲ್ಲದೆ ಆಟ ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು .ತನ್ನ ಭರ್ಜರಿ ಸಿಕ್ಸರ್ಗಳಿಂದ ಅಭಿಮಾನಿಗಳ ಮನ ಗೆದ್ದ ಕೊಹ್ಲಿ ಈ ಬಾರಿ ಐಪಿಎಲ್ ಕಣಕ್ಕೆ ಇಳಿಯುತ್ತಾರೋ ಇಲ್ವೋ ಎಂದು ಗೊಂದಲದಲ್ಲಿದ್ದರು.
ಆದರೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದೀಗ ಲಂಡನ್ನಿಂದ ಭಾರತಕ್ಕೆ ಹಾರಲು ಸಿದ್ದತೆ ನೆಡಸಿದ್ದಾರೆ. ಶೀಘ್ರದಲ್ಲಿ ಭಾರತಕ್ಕೆ ಬರಲಿದ್ದಾರೆ ಹಾಗೂ ತಮ್ಮ ತಂಡವನ್ನು 16 ರಂದು ಬಂದು ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 19ರಂದು ಚಿನ್ನಸ್ವಾಮಿ ಮೈದಾನದಲ್ಲಿ ಅನ್ಬಾಕ್ಸ್ ಇವೆಂಟ್ ನಡೆಸಲು ಆರ್ಸಿಬಿ ಸಜ್ಜಾಗಿದೆ. ಹಾಗೂ ಇವೆಂಟ್ ನಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗಿಯಾಗಲಿದ್ದಾರೆ.