News Karnataka Kannada
Thursday, May 02 2024
ಬೆಂಗಳೂರು

ಗೋಬಿ, ಕಾಟನ್ ಕ್ಯಾಂಡಿ ರಾಜ್ಯದಲ್ಲೂ ಬ್ಯಾನ್‌ ಆಗುವ ಸಾಧ್ಯತೆ

ಗೋಬಿ ಮಂಚೂರಿ ಎಂದರೆ ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗಂತು ಹೆಸರು ಕೇಳಿಯೆ ಬಾಯಲ್ಲಿ ನೀರು ಬರುತ್ತದೆ. ಹಾಗೂ ಕಾಟನ್‌ ಕ್ಯಾಂಡಿ ಮಕ್ಕಳ ನೆಚ್ಚಿನ ತಿನಿಸು ಆದರೆ ಇದೀಗ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ.
Photo Credit : News Kannada

ಬೆಂಗಳೂರು: ಗೋಬಿ ಮಂಚೂರಿ ಎಂದರೆ ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗಂತು ಹೆಸರು ಕೇಳಿಯೆ ಬಾಯಲ್ಲಿ ನೀರು ಬರುತ್ತದೆ. ಕಾಟನ್‌ ಕ್ಯಾಂಡಿ ಮಕ್ಕಳ ನೆಚ್ಚಿನ ತಿನಿಸು ಆದರೆ ಇದೀಗ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ. ಹೀಗಾಗಿ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳ ಬಳಿಕ ರಾಜ್ಯ ಸರ್ಕಾರವೂ ಅಸುರಕ್ಷಿತ ಕಾಟನ್‌ ಕ್ಯಾಂಡಿ, ಗೋಬಿಯನ್ನು ಬ್ಯಾನ್‌ ಮಾಡಲು ಮುಂದಾಗಿದೆ.

ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿ ಗಳಲ್ಲಿ ಆರೋಗ್ಯಕ್ಕೆ ಮಾರಕವಾದ ರೋಡಮೈನ್ -ಜಿ ಎಂಬ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತು ಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ಸೋಮವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಗೋಬಿ ಮಂಚೂರಿಯನ್ ಹಾಗೂ 100ಕ್ಕೂ ಹೆಚ್ಚು ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಅಸುರಕ್ಷಿತ ಎಂಬುದು ಸಾಬೀತಾಗಿದೆ.

ರೋಡಮೈನ್-ಜಿ ಹೊಂದಿರುವ ಕಾಟನ್ ಕ್ಯಾಂಡಿಯನ್ನು ತಿನ್ನುವವರು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ಜತೆಗೆ ಇದೊಂದು ವ್ಯಸನಕಾರಿ ಹಾಗೂ ಸ್ಟೋ ಪಾಯಿಷನ್ ಆಗಿಯೂ ಕೆಲಸ ಮಾಡಲಿದೆ ಎಂದು ವರದಿಗಳು ಸೂಚಿಸಿವೆ. ಹೀಗಾಗಿಯೇ ಇದನ್ನು ನಿಷೇಧ ಮಾಡಬೇಕು ಎಂಬ ಚರ್ಚೆಯಾಗಿದ್ದು, ಗೋಬಿ ನಿಷೇಧ ಮಾಡಿದರೆ ರೈತರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಗೋಬಿಗೆ ಅಡಿಕ್ಟಿಮ್ಸ್ (ವ್ಯಸನಕಾರಿ ವಸ್ತು) ಹಾಗೂ ಕೃತಕ ಬಣ್ಣ, ನಿಷೇಧಿತ ಉತ್ಪನ್ನಗಳ ಸೇರ್ಪಡೆಯನ್ನು ನಿಷೇಧಿಸಲಾಗುವುದು. ಈ ನಿಯಮ ಉಲ್ಲಂಘನೆ ಮಾಡಿದರೆ ಆಹಾರ ಸುರಕ್ಷತೆ ನಿಯಮಗಳ ಆಡಿ ಈಗಾಗಲೇ ಇರುವ ನಿಯಮದಂತೆ 10 ಲಕ್ಷರು.ವರೆಗೆ ದಂಡವಿಧಿ ಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ವಸ್ತುಗಳನ್ನು ಬಳಕೆ ಮಾಡದ ಕಾಟನ್ ಕ್ಯಾಂಡಿ ಅಥವಾ ಗೋಬಿ ಮಂಚೂರಿಯನ್ ನಿಷೇಧವಿಲ್ಲ. ಗೋಬಿಯನ್ನು ನಾವು ನಿಷೇಧ ಮಾಡಲು ಬರುವುದಿಲ್ಲ. ಇನ್ನು ಹಾನಿಕಾರಕ ಪದಾರ್ಥ ಬಳಕೆ ಮಾಡದಿದ್ದರೆ ಕಾಟನ್ ಕ್ಯಾಂಡಿಯಲ್ಲೂ ಸಕ್ಕರೆ ಮತ್ತಿತರ ಅಂಶ ಬಿಟ್ಟು ಬೇರೇನೂ ಇರುವುದಿಲ್ಲ. ಹೀಗಾಗಿ ಹಾನಿಕಾರಕ ಪದಾರ್ಥಗಳ ಬಳಕೆ ಮಾತ್ರವೇ ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು