ಬೆಂಗಳೂರು: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ ಹಾಕಿದ್ದ ಮಾಜಿ ಕಾರ್ಪೊರೇಟರ್ ಪದ್ಮರಾಜ್ನನ್ನು ಬಂಧಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
“ನನಗೆ ಹಣ ಬೇಕು. ಇಲ್ಲದಿದ್ರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇನೆ. ತಾಕತ್ತಿದ್ರೆ ಬಾ ಮನೆ ಹತ್ತಿರ ಎಂದು ಮಾಜಿ ಪದ್ಮರಾಜ್ ನನಗೆ ಆವಾಜ್ ಹಾಕಿದ್ದಾನೆ ಎಂದು ಮಾಜಿ ಸಚಿವ ಗೋಪಾಲಯ್ಯಗೆ ಆರೋಪಿಸಿದ್ದರು. ಪದ್ಮರಾಜ್ ಬಸವೇಶ್ವರನಗರ ಮಾಜಿ ಕಾರ್ಪೊರೇಟರ್ ಆಗಿದ್ದಾರೆ.
ಗೋಪಾಲಯ್ಯರವರು ಬಿಜಿಎಸ್ನಲ್ಲಿ ಪದ್ಮರಾಜ್ ಮಗಳಿಗೆ ಸೀಟ್ ಕೊಡಿಸಿದ್ದರಂತೆ. ಸಚಿವರಾಗಿದ್ದ ವೇಳೆ ರಾಜಾಜಿನಗರ ESI ಆಸ್ಪತ್ರೆಯಲ್ಲಿ ವೈದ್ಯೆ ಕೆಲಸವನ್ನು ಕೊಡಿಸಿದ್ದರಂತೆ. ಆದರೀಗ ಮಧ್ಯರಾತ್ರಿ ಮಾಜಿ ಸಚಿವ ಗೋಪಾಲಯ್ಯಗೆ ಪದ್ಮರಾಜ್ ಕರೆ ಮಾಡಿ ನನಗೆ ಹಣ ಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಳೆದ ರಾತ್ರಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಬೆಳಗ್ಗೆ ಸ್ಪೀಕರ್ ಯುಟಿ ಖಾದರ್ಗೆ ದೂರು ನೀಡಿ ಸದನದಲ್ಲಿ ಪ್ರಸ್ತಾಪಿಸಿದ್ದರು.