ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಘಟನೆಯ ಬಳಿಕ ದುಷ್ಕರ್ಮಿಗಳಿಂದ ಮತ್ತೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಮೇಲ್ ಮಾಡಿರುವ ದುಷ್ಕರ್ಮಿಗಳು, ಕಳೆದ ಮಾರ್ಚ್ 2ರ ಶನಿವಾರ ಮಧ್ಯಾಹ್ನ 2:48ಕ್ಕೆ ಬ್ಲಾಸ್ಟ್ ಮಾಡುವ ಬೆದರಿಕೆ ಹಾಕಿದ್ದರು.
ಶಾಹಿದ್ ಖಾನ್ ಹೆಸರಲ್ಲಿ ರಾಜ್ಯ ಸರ್ಕಾರಕ್ಕೆ ಬಾಂಬ್ ಬ್ಲಾಸ್ಟ್ ಮಾಡುವ ಇ-ಮೇಲ್ ರವಾನೆಯಾಗಿದೆ.
ಖುದ್ದು ಪೊಲೀಸರೇ ದಾಖಲಿಸಿರೋ ಎಫ್ಐಆರ್ನಲ್ಲಿ ಈ ಸ್ಫೋಟಕ ಅಂಶ ಬಯಲಾಗಿದೆ. ಕಳೆದ ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಬಾಂಬ್ ಬೆದರಿಕೆ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು ಪೊಲೀಸ್ ಕಮಿಷನರ್ಗೂ ಬೆದರಿಕೆ ಮೇಲ್ ಕಳುಹಿಸಿರುವ ದುಷ್ಕರ್ಮಿಗಳು ಬಸ್, ರೈಲು, ದೇವಸ್ಥಾನ, ಹೋಟೆಲ್ಗಳಲ್ಲಿ ಬಾಂಬ್ ಇಡ್ತೀವಿ. ಸಾರ್ವಜನಿಕ ಸ್ಥಳಗಳು ಹಾಗೂ ಅಂಬಾರಿ ಉತ್ಸವ ಬಸ್ಗಳಲ್ಲಿ ಬಾಂಬ್ ಇಡ್ತೀವಿ ಅನ್ನೋ ಬೆದರಿಕೆ ಆಗಿದ್ದಾರೆ.
ಈ ಇ-ಮೇಲ್ ಕಳುಹಿಸಿರೋದು ಯಾರು ಅಂತ ಪತ್ತೆ ಹಚ್ಚಲು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಟೀಮ್ ವಿಶೇಷ ತನಿಖೆಯನ್ನು ಆರಂಭಿಸಿದೆ.