ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಎನ್ಡಿಎಯೊಂದಿಗೆ ಕೈಜೋಡಿಸಲಿದೆ ಎಂಬ ಮಾತು ದಟ್ಟವಾಗಿತ್ತು. ಅದಕ್ಕೆ ತಕ್ಕಂತೆ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಅವರು ಸದನದ ಹೊರಗೆ ಮತ್ತು ಒಳಗೆ ಬಿಜೆಪಿಯೊಂದಿಗೆ ಪ್ರತಿಭಟನೆ ಸಹಿತ ಪ್ರತಿ ವಿಷಯಗಳಲ್ಲಿ ಸಖ್ಯ ಬೆಳೆಸಿದ್ದು, ಗುಸು ಗುಸು ಮಾತಿಗೆ ಗಟ್ಟಿ ನೆಲೆ ಒದಗಿಸಿತ್ತು. ಆದರೆ ಗುರುವಾರ ರಾತ್ರಿ ನಡೆದ ಹೈ ಲೆವೆಲ್ ಮೀಟಿಂಗ್ ನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡ ಯುಪಿಎ (ಇಂಡಿಯಾ), ಎನ್ ಡಿಎ ಯೊಂದಿಗೆ ಹೋಗದಿರಲು ನಿರ್ಧರಿಸಿದ್ದಾರೆ.
ಯಾವ ಮೈತ್ರಿಕೂಟದ ಜೊತೆ ಸೇರುವ ಪ್ರಶ್ನೆಯೇ ಇಲ್ಲ, ಕುಮಾರಸ್ವಾಮಿಯವರು ಮೊನ್ನೆ ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿರೋಧಿಸಿ ಟ್ವೀಟ್ ಮಾಡಿದ್ದರು. ಅದನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಸದನದಲ್ಲಿ ಹೋರಾಟ ಮಾಡಿದರು. ಸದನದಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ, ಬಿಜೆಪಿಯವರು ಕಲಾಪ ಬಹಿಷ್ಕರಿಸಿ ವಾಕ್ ಔಟ್ ಮಾಡಿದರು. ಆಗ ಕುಮಾರಸ್ವಾಮಿಯವರೂ ಅವರನ್ನು ಅನುಸರಿಸಿದರು. ಅದಕ್ಕೆ ಜೆಡಿಎಸ್-ಬಿಜೆಪಿ ಒಟ್ಟಾಗಿದೆ ಎಂದು ಕಥೆ ಹೆಣೆಯುವುದು, ಸಂಬಂಧ ಕಲ್ಪಿಸುವುದು ಬೇಡ ಎಂದರು.