News Karnataka Kannada
Saturday, May 11 2024
ಬೆಂಗಳೂರು

ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ, ಚಿಕೂನ್ ಗುನ್ಯಾ

What needs to be done to get rid of dengue disease?
Photo Credit : News Kannada

ಬೆಂಗಳೂರು: ಮುನಿದಿರುವ ಮುಂಗಾರು ನಡುವೆಯೇ ಆಗಾಗ್ಗೆ ಸರಿಯುತ್ತಿರುವ ಮಳೆಯಿಂದ ರೋಗಕಾರಕ ಈಡಿಸ್ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಗಣಗಳು ಏರಿಕೆಯಾಗುತ್ತಿದ್ದು, ಜನರು ಜ್ವರ ಬಾಧೆಯಿಂದ ಕಂಗಾಲಾಗಿದ್ದಾರೆ.

ಡೆಂಗ್ಯೂ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ಸಮೀಪಿಸಿದ್ದು, ಚಿಕೂನ್ಯ ಗುನ್ಯಾ ಸೋಂಕಿತರ ಸಂಖ್ಯೆಯೂ ಒಂದು ಸಾವಿರಕ್ಕೆ ಹತ್ತಿರದಲ್ಲಿದೆ.

ಈವರೆಗೂ 68 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, 9,559 ಮಂದಿಗೆ ಸೋಂಕು ದೃಢಪಟ್ಟಿದೆ. ಅದೇ ರೀತಿ 22 ಸಾವಿರಕ್ಕೂ ಅಧಿಕ ಚಿಕೂನ್ ಗುನ್ಯಾ ಶಂಕತರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, ಇದುವರೆಗೂ 982 ಮಂದಿ ರೋಗದಿಂದ ಬಳಲಿದ್ದಾರೆ.

ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುವ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ರೋಗವು ವೈರಾಣು ಸೋಂಕಾಗಿದೆ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಇದರಿಂದ ಹರಡುವ ರೋಗಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಚಿಕಿತ್ಸೆ ಇಲ್ಲದಿರುವ ಕಾರಣ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ರೋಗ ಉಲ್ಬಣಗೊಂಡು, ಮಾರಣಾಂತಿಕವಾಗುವ ಸಾಧ್ಯತೆಗಳಿವೆ.

ಪ್ರತಿ ಜಿಲ್ಲೆಯಲ್ಲೊಂದರಂತೆ ಬೆಂಗಳೂರು ನಗರ (5,511), ಮೈಸೂರು (454), ಉಡುಪಿ (429),ಶಿವಮೊಗ್ಗ (232), ಕಲಬುರಗಿ (219), ದಕ್ಷಿಣ ಕನ್ನಡ (210), ವಿಜಯಪುರ (188), ಚಿತ್ರದುರ್ಗ (167), ಬೆಳಗಾವಿ (154), ದಾವಣಗೆರೆ (152), ಹಾಸನ (145),ಚಿಕ್ಕಮಗಳೂರು (143),ತುಮಕೂರು (136), ಕೊಡಗು (119) ಧಾರವಾಡ (115), ಚಾಮರಾಜನಗರ (113), ಮಂಡ್ಯ (108), ಕೋಲಾರ (106) ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು