ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಇಂತಹ ಬರ ಪರಿಸ್ಥಿತಿಯನ್ನು ಮೂರು-ನಾಲ್ಕು ದಶಕಗಳಿಂದ ನೋಡಿರಲಿಲ್ಲ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಉಸ್ತುವಾರಿಯೂ ಆಗಿರುವ ಅವರು, ಬೆಂಗಳೂರಿನಲ್ಲಿರುವ ೧೩,೯೦೦ ಕೊಳವೇಬಾವಿಗಳ ಪೈಕಿ ೬,೯೦೦ ಕೊಳವೇಬಾವಿಗಳು ಬತ್ತಿಹೋಗಿವೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಹಾಗು BBMP ಮತ್ತು BWSSB ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ೨೪೦ ತಾಲೂಕುಗಳಲ್ಲಿ ೨೨೩ರನ್ನು ಬರಪೀಡಿತ ಪ್ರದೇಶಗಳೇಂದು ಘೋಷಿಸಲಾಗಿದ್ದು, ಅವುಗಳಲ್ಲಿ ೧೯೬ ತಾಲೂಕುಗಳಲ್ಲಿ ಇದರ ತೀವ್ರತೆ ಹೆಚ್ಚಿರಲಿದೆ ಎನ್ನಲಾಗಿದೆ.