ದಾವಣಗೆರೆ: ಕಳೆದ ವಾರ ವಿದ್ಯಾರ್ಥಿನಿಯೊಬ್ಬಳನ್ನು ಕೊಂದು ಐವರನ್ನು ಗಾಯಗೊಳಿಸಿದ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸೋಮವಾರ ‘ ‘ಲೋನ್ ಟಸ್ಕರ್” ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಕಾರ್ಯಾಚರಣೆಯಲ್ಲಿ ಸೋಮವಾರದಿಂದ ಆರು ಆನೆಗಳನ್ನು ಸೇರಿಸಲು ಅರಣ್ಯ ಇಲಾಖೆ ಯೋಜಿಸುತ್ತಿದೆ. ತಲಾ ಹತ್ತು ಸಿಬ್ಬಂದಿಗಳನ್ನು ಒಳಗೊಂಡ ಹತ್ತು ತಂಡಗಳು ಸೇರಿದಂತೆ ಸುಮಾರು 150 ಸಿಬ್ಬಂದಿಯನ್ನು ಸೇವೆಗೆ ನೀಯೋಜಿಸಲಾಗಿದೆ.
ಡ್ರೋನ್ ಮತ್ತು ಆನೆ ನಡವಳಿಕೆ ಅರಿತ ತಜ್ಞರನ್ನು ಬೆಂಗಳೂರಿನಿಂದ ಕರೆಸಲಾಗಿದೆ. ಈ ಪ್ರದೇಶದಲ್ಲಿ ಆನೆಯ ಹೆಜ್ಜೆಗುರುತುಗಳ ಕುರುಹುಗಳ ಆಧಾರದ ಮೇಲೆ ತಂಡವು ಕಾರ್ಯಾಚರಣೆ ಆರಂಭಿಸಿದೆ. ಅಧಿಕಾರಿಗಳು ಈ ಪ್ರದೇಶದ ಗ್ರಾಮಸ್ಥರಿಗೆ ರಾತ್ರಿಯಲ್ಲಿ ಹೊರಗೆ ಹೋಗದಂತೆ ಮತ್ತು ಕೆಲವು ದಿನಗಳವರೆಗೆ ತಮ್ಮ ಕೃಷಿ ಭೂಮಿಗೆ ಹೋಗುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.