News Karnataka Kannada
Sunday, May 12 2024
ದಾವಣಗೆರೆ

ದಾವಣಗೆರೆ: ಆನೆ ಸೆರೆಹಿಡಿಯಲು ಕಾರ್ಯಾಚರಣೆ ತಂಡ ಸಿದ್ಧ

ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ರೈತರು ತಮ್ಮ ಜಮೀನಿಗೆ ದಾಳಿ ಮಾಡಲು ಬಂದ ಕಾಡಾನೆಯನ್ನು ಟ್ರಾಕ್ಟರ್ ಮೂಲಕ ಹಿಮ್ಮೆಟ್ಟಿಸಿದ ಘಟನೆ  ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದಲ್ಲಿ ನಡೆದಿದೆ.
Photo Credit : Pixabay

ದಾವಣಗೆರೆ: ಕಳೆದ ವಾರ ವಿದ್ಯಾರ್ಥಿನಿಯೊಬ್ಬಳನ್ನು ಕೊಂದು ಐವರನ್ನು ಗಾಯಗೊಳಿಸಿದ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಸೋಮವಾರ ‘ ‘ಲೋನ್ ಟಸ್ಕರ್” ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಕಾರ್ಯಾಚರಣೆಯಲ್ಲಿ ಸೋಮವಾರದಿಂದ ಆರು ಆನೆಗಳನ್ನು ಸೇರಿಸಲು ಅರಣ್ಯ ಇಲಾಖೆ ಯೋಜಿಸುತ್ತಿದೆ. ತಲಾ ಹತ್ತು ಸಿಬ್ಬಂದಿಗಳನ್ನು ಒಳಗೊಂಡ ಹತ್ತು ತಂಡಗಳು ಸೇರಿದಂತೆ ಸುಮಾರು 150 ಸಿಬ್ಬಂದಿಯನ್ನು ಸೇವೆಗೆ ನೀಯೋಜಿಸಲಾಗಿದೆ.

ಡ್ರೋನ್ ಮತ್ತು ಆನೆ ನಡವಳಿಕೆ ಅರಿತ ತಜ್ಞರನ್ನು ಬೆಂಗಳೂರಿನಿಂದ ಕರೆಸಲಾಗಿದೆ. ಈ ಪ್ರದೇಶದಲ್ಲಿ ಆನೆಯ ಹೆಜ್ಜೆಗುರುತುಗಳ ಕುರುಹುಗಳ ಆಧಾರದ ಮೇಲೆ ತಂಡವು ಕಾರ್ಯಾಚರಣೆ ಆರಂಭಿಸಿದೆ.  ಅಧಿಕಾರಿಗಳು ಈ ಪ್ರದೇಶದ ಗ್ರಾಮಸ್ಥರಿಗೆ ರಾತ್ರಿಯಲ್ಲಿ ಹೊರಗೆ ಹೋಗದಂತೆ ಮತ್ತು ಕೆಲವು ದಿನಗಳವರೆಗೆ ತಮ್ಮ ಕೃಷಿ ಭೂಮಿಗೆ ಹೋಗುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು