ದಾವಣಗೆರೆ: ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ರೈತ ಹನಮಂತಪ್ಪ ಎಂಬುವವರ ಮನೆಯಲ್ಲಿ ದೇವರ ಹಬ್ಬವಿತ್ತು. ದೇವರ ಹಬ್ಬ ಅಂದರೆ, ಇಲ್ಲಿ ದೇವಿಗೆ ಬಲಿಕೊಟ್ಟು ಭರ್ಜರಿ ಬಾಡೂಟ ಮಾಡಿ ಕುಟುಂಬಸ್ಥರೆಲ್ಲರೂ ಸೇರಿ ಸವಿಯುತ್ತಾರೆ. ಅದರಂತೆ ಎಲ್ಲರೂ ಸಂಭ್ರಮದಿಂದ ಬಾಡೂಟ ಮಾಡಿ, ಪರಸ್ಪರ ಕಷ್ಟ-ಸುಖ ಮಾತಾಡುತ್ತಿದ್ದರು.
ಈ ವೇಳೆ ಮನೆಯಲ್ಲಿನ ತಾಯಿ ಪಕ್ಕದ ಮನೆ ಅಜ್ಜಿಗೆ ಸ್ಪಲ್ಪ ಸಾಂಬಾರ್ ಕೊಟ್ಟು ಬರಲು ಮಗನಿಗೆ ಹೇಳಿದ್ದಳು. ಹೀಗೆ ಮಗ ಸಮರ್ಥ ಸಾರು ತೆಗೆದುಕೊಂಡು ಹೋಗುವಾಗ ಬಿದ್ದಿದ್ದಾನೆ. ಈ ವೇಳೆ ಬಿಸಿ ಸಾರು ಆತನ ಮೈ ಮೇಲೆ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿದೇ ಇದೀಗ ಬಾಲಕ ಮೃತನಾಗಿದ್ದಾನೆ.