ದಾವಣಗೆರೆ: ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಹಲವರ ನಿದ್ರೆಗೆಡಿಸಿದೆ. ಆದ್ರೆ ನಕಲಿ ಹುಲಿ ಉಗರು ಪೆಂಡೆಂಟ್ ತಯಾರಿಸಿ ಅದರ ಮೇಲೆ ಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹುಲಿ ಉಗುರಿನ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿದ ನಂತರ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಕರೆದುಕೊಂಡು ಪೊಲೀಸರು ಅರಣ್ಯ ಇಲಾಖೆ ತನಿಖೆ ಮಾಡಿದೆ.
ಹುಲಿ ಉಗುರು ಪೆಂಡೆಂಟ್ ನಕಲಿ ಕೃತಕ ಎಂದು ಗೊತ್ತಾದ ಮೇಲೆ ಕೆಲವರನ್ನು ಬಿಟ್ಟುಕಳಿಸಿದೆ. ಇದೀಗ ಪೊಲೀಸ್ ಠಾಣೆಗಳಲ್ಲಿ ದೂರು ಆದ ನಂತರ ನಕಲಿ ಪೆಂಡೆಂಟ್ ಗಳನ್ನು ಯಾರು ಖರೀದಿಸುತ್ತಿಲ್ಲ.
ಕೃತಕ ಹುಲಿ ಉಗುರು ತಯಾರಿಸುವುದನ್ನು ಕುಲಕಸುಬಾಗಿ ಮಾಡಿಕೊಂಡಿರುವ ಹಕ್ಕಿಪಿಕ್ಕಿ ಸಮುದಾಯಕ್ಕೆ ಇದೀಗ ಒಂದು ತೆರನಾದ ಭಯ ಆವರಿಸಿದೆ. ನಕಲಿ ಹುಲಿ ಉಗುರು, ರುದ್ರಾಕ್ಷಿ, ಮಾಸಾಜ್ ಎಣ್ಣೆ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಜನಾಂಗದ ಬಿಸಿನಸ್ ಗೆ ಭಾರಿ ಹೊಡೆತ ಬಿದ್ದಿದೆ. ಈ ವೃತ್ತಿ ಬಿಟ್ಟು ಬೇರೆ ಯಾವುದೇ ಕೆಲಸ ಗೊತ್ತಿಲ್ಲದ ಸಮುದಾಯಕ್ಕೆ ಈಗ ಸಂಕಷ್ಟ ಎದುರಾಗಿದ್ದು ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಅನುವು ಮಾಡಿಕೊಡುವಂತೆ ಬೇಡಿಕೊಂಡಿದ್ದಾರೆ.