ಬೆಂಗಳೂರು: ಕಾಟೇರ ಸಕ್ಸಸ್ ಸೆಲೆಬ್ರೇಷನ್ ಮಾಡಲು ಲೇಟ್ ನೈಟ್ ತನಕ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅಭಿಷೇಕ್ ಅಂಬರೀಷ್, ರಾಕ್ಲೈನ್ ವೆಂಕಟೇಷ್ ಸೇರಿದಂತೆ ಖ್ಯಾತ ನಟರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು.ಪೊಲೀಸ್ ವಿಚಾರಣೆ ನಂತರ ರಾಕ್ ಲೈನ್ ವೆಂಕಟೇಶ್ ಅವರು ಈ ಒಂದು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪಾರ್ಟಿ ಆಗುತ್ತಿತ್ತು. ನಾನೇ ಊಟ ಮಾಡಿಕೊಂಡು ಹೋಗಿ ಎಂದು ಕೇಳಿಕೊಂಡಿದ್ದೆ. ಚಿಕ್ಕ ಗಲಾಟೆ ಗಲಭೆ ಆಗಿಲ್ಲ. ಅಕ್ಕಪಕ್ಕದವರಿಗೆ ತೊಂದರೆ ಆಗಿಲ್ಲ. ನಾವು ಗ್ರಾಹಕರು. ರೂಲ್ಸ್ ವಯಲೇಷನ್ಸ್ ಆಗಿದೆ ಅಂತಿದ್ದಾರೆ. ಇದೇ ಮೊದಲು ಹೀಗೆ ಆಗಿದೆ. ಇನ್ನು ಒಂದು ಗಂಟೆ ನಂತರ ಎಷ್ಟು ಜನ ಪಾರ್ಟಿ ಮಾಡುತ್ತಾರೆ? ಎಷ್ಟು ಜನರಿಗೆ ನೀವು ನೋಟಿಸ್ ಕೊಟ್ಟು ಠಾಣೆಗೆ ಕರೆಸಿದ್ದೀರಿ? ದರ್ಶನ್ ಅವರನ್ನ ಯಾಕೆ ಟಾರ್ಗೆಟ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ದರ್ಶನ್ ಅವರ ಸಿನಿಮಾ ಸಕ್ಸಸ್ ಆಗಿದೆ. ಅದಕ್ಕಾಗಿ ಬೇಕಂತಲೇ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಯಾರು ಮಾಡಿರೋದು ಎಂದು ರಾಜ್ಯಕ್ಕೇ ಗೊತ್ತು ಎಂದಿದ್ದಾರೆ. ದರ್ಶನ್ ಒಳ್ಳೆ ಸ್ಥಾನಮಾನಕ್ಕೆ ಹೋಗುತ್ತಿದ್ದಾರೆ. ಅದಕ್ಕಾಗಿ ಅವರ ಮೇಲೆ ಟಾರ್ಗೆಟ್ ಮಾಡಲಾಗುತ್ತಿದೆ. ಅವರ ಮೇಲೆ ಯಾಕೆ ಈ ಕ್ರಮ? ನಾವು ಫೈಟ್ ಮಾಡಲ್ಲ ಎಂದಿದ್ದಾರೆ.