ಹೊಸದುರ್ಗ : ತಾಲ್ಲೂಕಿನ ಮಾಡದಕೆರೆ ಹೋಬಳಿಯ ಬೆನಕನಹಳ್ಳಿಯಲ್ಲಿ ಫಸಲಿಗೆ ಬಂದಿದ್ದ ಮತ್ತು ಒಂದು ವರ್ಷದ 1,300 ಅಡಿಕೆ ಗಿಡಗಳನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಕಡಿದು ದ್ವಂಸ ಮಾಡಿದ್ದಾರೆ.
ಬೆನಕನಹಳ್ಳಿಯ ರೈತ ರಂಗನಾಥ್ ಎಂಬುವರಿಗೆ ಈ ಅಡಿಕೆ ಗಿಡಗಳು ಸೇರಿವೆ. 5 ಎಕರೆ ಪ್ರೇಶದಲ್ಲಿ ಈಗಾಗಲೇ ಅಡಿಕೆ ಫಸಲು ಪಡೆಯುತ್ತಿದ್ದಾರೆ. ಒಂದು ವರ್ಷದ ಹಿಂದೆ 2 ಎಕೆರೆಯಲ್ಲಿ ಸಾವಿರ ಅಡಿಕೆ ಗಿಡಗಳನ್ನು ಹಾಕಿದ್ದರು. ಇನ್ನೊಂದು ಕಡೆ 300 ಗಿಡಗಳು ಫಸಲಿಗೆ ಬರುವ ಹಂತದಲ್ಲಿದ್ದವು. ಈ ಎಲ್ಲಾ ಗಿಡಗಳನ್ನು ಕಡಿದು ಹಾಕಲಾಗಿದೆ.
ರಂಗನಾಥ್ ಅವರು ಎಂದಿನಂತೆ ಭಾನುವಾರ ಬೆಳಿಗ್ಗೆ ತೋಟಕ್ಕೆ ಹೋದಾಗ ಅಡಿಕೆ ಗಿಡಗಳು ತುಂಡಾಗಿ ಬಿದ್ದಿರುವುದನ್ನು ಕಂಡು ಕಂಗಾಲಾದರು. ಈ ಸಂಬಂಧ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಕಾರಣ ತನಿಖೆ ಮೂಲಕ ತಿಳಿಯಬೇಕಿದೆ.