ಚಿಕ್ಕಬಳ್ಳಾಪುರ: ರಾಜ್ಯದ ಈ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ಜಾತಿಗೆ ಸೇರಿದ ಆರೋಪಿಗಳು ದಲಿತ ಬಾಲಕನ ಮೇಲೆ ಕಳ್ಳತನದ ಶಂಕೆ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದರು.
ಕೆಂಪದೇನಹಳ್ಳಿ ನಿವಾಸಿ ಯಶವಂತ್ ತನ್ನ ವಯಸ್ಸಿನ ಇತರೆ ಹುಡುಗ ಹುಡುಗಿಯರೊಂದಿಗೆ ಆಟವಾಡುತ್ತಿದ್ದ. ಮೇಲ್ಜಾತಿಗೆ ಸೇರಿದ ಬಾಲಕಿಯ ಚಿನ್ನದ ಕಿವಿಯೋಲೆಗಳನ್ನು ಯಶವಂತ್ ಕದ್ದಿದ್ದ ಎಂಬ ಆರೋಪ ಕೇಳಿಬಂದಿತ್ತು.
ಬಾಲಕನ ಪಾತ್ರವನ್ನು ಶಂಕಿಸಿ ಮೇಲ್ಜಾತಿಯ ಗುಂಪು ಸಂತ್ರಸ್ತ ಬಾಲಕನನ್ನು ಎಳೆದೊಯ್ದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಮಗನನ್ನು ರಕ್ಷಿಸಲು ಓಡಿ ಬಂದಾಗ ಆತನ ತಾಯಿಯೂ ಥಳಿಸಿದ್ದಾರೆ.
ಯಶವಂತ್ ಹಾಗೂ ಆತನ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಚಿಂತಾಮಣಿ ಗ್ರಾಮಾಂತರ ಪೊಲೀಸರು ಸಂತ್ರಸ್ತ ಬಾಲಕ ಮತ್ತು ಆತನ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಮೇಲ್ಜಾತಿಗೆ ಸೇರಿದ 10 ಮಂದಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿಂದೂ ದೇವರ ವಿಗ್ರಹವನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ ಮೇಲ್ಜಾತಿ ಜನರು 60,000 ರೂಪಾಯಿ ದಂಡ ವಿಧಿಸಿರುವುದು ಗಮನಾರ್ಹ.
ಬಾಲಕನ ಕುಟುಂಬವನ್ನು ಸಹ ಬಹಿಷ್ಕರಿಸಲಾಯಿತು ಮತ್ತು ಸರ್ಕಾರಿ ಸಂಸ್ಥೆಗಳ ಮಧ್ಯಸ್ಥಿಕೆಯ ನಂತರ ಸಮಸ್ಯೆಯನ್ನು ಪರಿಹರಿಸಲಾಯಿತು.