News Karnataka Kannada
Monday, April 29 2024
ಚಿಕ್ಕಬಳ್ಳಾಪುರ

ವರದಕ್ಷಿಣೆ ಕಿರುಕುಳ: 6 ವರ್ಷದ ಮಗು ಜತೆ ಆತ್ಮಹತ್ಯೆಗೆ ಶರಣಾದ ಗೃಹಿಣಿ

Mother dead wherever she was, come home early: Son in tears with mother's body for sister
Photo Credit :

ಶಿಡ್ಲಘಟ್ಟ : ಗೃಹಿಣಿಯೊಬ್ಬರು ವರದಕ್ಷಿಣೆ ಕಿರುಕುಳ ಸಹಿಸಲಾಗದೆ ತನ್ನ 6 ವರ್ಷದ ಮಗು ಜತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿಯಲ್ಲಿ ನಡೆದಿದೆ.

ಸೊಣ್ಣೇಗೌಡ ಎಂಬುವರ ಪತ್ನಿ ನವಲತಾ (25) ಮತ್ತು ಪುತ್ರ ಅಂಜನ್​ ಗೌಡ (6) ಮೃತರು. ಬುಧವಾರ ಸಂಜೆ ತೋಟದ ಮನೆಯತ್ತ ಹೋದವರು ವಾಪಸ್​ ಬಂದಿರಲಿಲ್ಲ. ಕುಟುಂಬಸ್ಥರು ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.

ತೋಟದ ಬಳಿಯ ನೀರಿನ ಸಂಪಿನಲ್ಲಿ ಗುರುವಾರ ತಾಯಿ-ಮಗನ ಶವಗಳು ಪತ್ತೆಯಾಗಿವೆ. ಮಗಳು ಮತ್ತು ಮೊಮ್ಮಗನ ಸಾವಿನ ಸುದ್ದಿ ಬರುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ನನ್ನ ಮಗಳು ಮತ್ತು ಮೊಮ್ಮಗನ ಸಾವಿಗೆ ಅಳಿಯ ಸೊಣ್ಣೇಗೌಡ ಹಾಗೂ ಆತನ ಪಾಲಕರೇ ಕಾರಣ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅವರಿಬ್ಬರೂ ಸತ್ತಿದ್ದಾರೆ ಎಂದು ಮೃತಳ ಪಾಲಕರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು