ಚಿಕ್ಕಬಳ್ಳಾಪುರ : ಬಿಟ್ ಕಾಯಿನ್ ಹಗರಣ ತನಿಖೆಗೆ ಆದೇಶಿಸಿದ್ದೆ ಬಿಜೆಪಿ ಸರಕಾರ, ಆದೇಶ ಮಾಡಿದವರನ್ನೆ ವಿಪಕ್ಷಗಳು ಟಾರ್ಗೆಟ್ ಮಾಡ್ತಿದ್ದಾರೆ. ಬೀಟ್ ಕಾಯಿನ್ ಬಗ್ಗೆ ಅನೇಕರು ಅನೇಕ ವ್ಯಾಖ್ಯಾನ ಗಳನ್ನು ಮಾಡ್ತಿದ್ದಾರೆ. ಇಡೀ ಆಡಳಿತ ವ್ಯವಸ್ಥೆಯೇ ಈಹಗರಣದಲ್ಲಿದೆ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಪಕ್ಷಕ್ಕೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ತಾಲೂಕಿನ ನವಿಲುಗುರ್ಕಿ ಗ್ರಾ.ಪಂ ಸದಸ್ಯ ನದಿಯಲ್ಲಿ ಕೊಚ್ಚಿ ಹೋಗಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸಚಿವ ಡಾ.ಕೆ.ಸುಧಾಕರ್ ಬಿಟ್ ಕಾಯಿನ್ ಬಗ್ಗೆ ಮಾತನಾಡಿದರು.
ಬಿಟ್ ಕಾಯಿನ್ ಬಗ್ಗೆ ವಿಪಕ್ಷಗಳ ಆರೋಪ ಬಾಲಿಶತನದಿಂದ ಕೂಡಿದ್ದು, ಇಂತಹ ಪಾಪದ ಕೆಲಸವನ್ನು ಸಿಎಂ ಆಗಲಿ, ಸಚಿವರಾಗಲಿ ಮಾಡಿಲ್ಲ, ಯಾರ ಪಾತ್ರವು ಎಳ್ಳಷ್ಟಿಲ್ಲ ಎಂದರು.
ಸಿಎಂ ಬೊಮ್ಮಾಯಿ 100 ದಿನಗಳನ್ನು ಪೂರೈಸಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಸಿಎಂ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದರು.
ಈ ಹಗರಣ ನಡೆದಿರೋದು ಹಿಂದಿನ ಸರಕಾರದಲ್ಲಿ. ಇದರಲ್ಲಿ ಭಾಗಿಯಾಗಿರೋ ಯಾರನ್ನೂ ಬಿಡುವ ಪ್ರಶ್ನೇಯೇ ಇಲ್ಲ, ಸದ್ಯದಲ್ಲೆ ಭಾರತದಲ್ಲೂ ಕ್ರಿಪ್ಟೋ ಕರೆನ್ಸಿ ಯನ್ನು ಜಾರಿಗೆ ತರಲಿದೆ.ಕ್ರಿಪ್ಟೋ ಕರೆನ್ಸಿಯನ್ನು ಆರ್ ಬಿಐ ಗ್ರೌಂಡ್ ಕರೆನ್ಸಿಗೆ ತರುತ್ತಾರೆ ಎಂದರು.
ನಾಳೆ ಕಾಂಗ್ರೆಸ್ ನವರು ಏನು ದಾಖಲೆ ಬಿಡುಗಡೆ ಮಾಡ್ತಾರೋ ಮಾಡಲಿ ನೊಡೊಣ ವಿಶ್ವದಲ್ಲಿ ಈ ರೀತಿಯ 7 ಸಾವಿರ ಕ್ರಿಪ್ಟೋ ಕರೆನ್ಸಿಗಳಿವೆ ಆದರೆ ಒಂದು ದೇಶದಲ್ಲಿ ಮಾತ್ರ ಇದು ಅಧಿಕೃತ ವಾಗಿದೆ ಎಂದರು.