ಬೆಂಗಳೂರು, ; ಚಿಕ್ಕಬಳ್ಳಾಪುರ ಜಿಲ್ಲೆಯ ಸುತ್ತಮುತ್ತಲ ಪರಿಸರದಲ್ಲಿ ಗಣಿಗಾರಿಕೆಗಾಗಿ ಸ್ಫೋಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಲು ಕಾರಣವಿರಬಹುದು ಎಂದು ಪರಿಸರ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ವಾಭಾವಿಕವಾಗಿ ಭೂಕುಸಿತ ಸಂಭವಿಸಿರುವ ಸಾಧ್ಯತೆ ಇದ್ದರೂ ಬೆಟ್ಟದ ಆಸುಪಾಸಿನ ಪ್ರದೇಶಗಳಲ್ಲಿ ನಡೆಸುತ್ತಿರುವ ಗಣಿಗಾರಿಕೆಯಿಂದಾಗಿ ಭೂಕುಸಿತ ಸಂಭವಿಸಿರುವ ಸಾಧ್ಯತೆ ತಳ್ಳಿ ಹಾಕಲಾಗದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಬ್ರಹ್ಮಗಿರಿ ಬಳಿಯ ರಂಗಪ್ಪ ಸರ್ಕಲ್ ಪ್ರಾಂತ್ಯದಲ್ಲಿ ಹಠಾತ್ ಭೂಕುಸಿತ ಸಂಭವಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಆರ್. ಲತಾ ಅವರು ನಂದಿ ಬೆಟ್ಟ ಬೃಹತ್ ಶಿಲಾ ಕಲ್ಲಾಗಿದ್ದು, ಕಾಲಾಂತರದಲ್ಲಿ ಅದರ ಮೇಲೆ ಕಲ್ಲು-ಮಣ್ಣುಗಳು ತುಂಬಿಕೊಂಡು ಪರ್ವತ ರೂಪ ತಾಳಿದೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾರ್ಷಿಕ ೭೦೦ ರಿಂದ ೭೫೦ ಮಿ.ಮೀ ಮಳೆಯಾಗುತ್ತದೆ. ಮಂಗಳವಾರ ರಾತ್ರಿ ಒಂದೇ ದಿನ ೧೦೦ ಮಿ.ಮೀ ಮಳೆಯಾಗಿತ್ತು. ಹೀಗಾಗಿ ಕಲ್ಲು-ಮಣ್ಣುಗಳು ಸವೆದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಭೂಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಂದಿ ಬೆಟ್ಟ ಭೂ ಕುಸಿತಕ್ಕೆ ಗಣಿ ಸ್ಫೋಟ ಕಾರಣ ಎಂದು ಹೇಳಿದ ಪರಿಸರ ತಜ್ಞರು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.