News Karnataka Kannada
Monday, April 29 2024
ಚಿಕ್ಕಬಳ್ಳಾಪುರ

ಹದಿನೈದು ವರ್ಷಗಳ ನಂತರ ಸಿಕ್ಕಿಬಿದ್ದ ಕೊಲೆಗಾರರು

Murder Chikballapura 8 7 21
Photo Credit :

ಚಿಕ್ಕಬಳ್ಳಾಪುರ: ಕೊಲೆ ಮಾಡಿದ ಹದಿನೈದು ವರ್ಷಗಳ ನಂತರ ಬೆರಳಚ್ಚುಗಳ ಮೂಲಕ ಕೊಲೆಗಾರರು ಪತ್ತೆಯಾಗಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ವೀರು ಅಲಿಯಾಸ್ ಜೈ ವೀರು ಎಂದು ಗುರುತಿಸಲಾಗಿದ್ದು, 2006ರ ನವೆಂಬರ್ 5 ರಂದು ಬಂಧಿತ ವೀರು ಬೆಂಗಳೂರಿನ ಯಶವಂತಪುರದ ಬಿ.ಕೆ ನಗರದಲ್ಲಿ ವೀಡಿಯೋ ಗೇಮ್ ಸೆಂಟರ್‍ನ ಮಾಲೀಕ ಶಶಿಧರನ್ ಎಂಬವರನ್ನ ಹಣಕ್ಕಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ವೀರು ಜೊತೆ ಮತ್ತಿಬ್ಬರು ಸೇರಿ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಇದೇ ವೀರು ಅಲಿಯಾಸ್ ಜೈ ವೀರು, 2010ರ ಮೇ 5ರಂದು ನಂದಿ ಗಿರಿಧಾಮದಲ್ಲಿ ತನ್ನಿಬ್ಬರು ಸಹಚರರ ಜೊತೆ ಸೇರಿ ಎಚ್.ಎಸ್.ಆರ್ ಲೇಔಟ್ ನಿವಾಸಿ ವಾಸೀತ್ ನಿಸಾರ್ ಎಂಬವರ ಬಳಿ 3 ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದರು. ಈ ಸಂಬಂಧ ಅಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿ ವೀರು ನನ್ನ ಬಂಧಿಸಿ ಜೈಲುಗಟ್ಟಿದ್ದರು. ಕಳ್ಳತನ ಪ್ರಕರಣದಲ್ಲಿ ಈತನ ಬೆರಳಚ್ಚುಗಳನ್ನ ಸಹ ಸಂಗ್ರಹಿಸಿಟ್ಟುಕೊಂಡಿದ್ದರು. ಈಗ ಈತನ ಬೆರಳಚ್ಚುಗಳು ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಟಿ ಸಿಸ್ಟಂನಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಈತನ ಬೆರಳಚ್ಚುಗಳು ಯಶವಂತಪುರದಲ್ಲಿ ನಡೆದಿದ್ದ ಶಶಿಧರನ್ ಕೊಲೆ ಪ್ರಕರಣಕ್ಕೆ ತಾಳೆಯಾಗಿವೆ. ಹೀಗಾಗಿ ಆರೋಪಿ ವೀರುನನ್ನ ಯಶವಂತಪುರ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣವನ್ನು ಒಪ್ಪಿಕೊಂಡಿದ್ದಾನೆ.
ವೀರು ತನ್ನ ಸ್ನೇಹಿತರಾದ ಅವಿನಾಶ್ ಹಾಗೂ ಮೋಸಿನ್ ಖಾನ್ ಜೊತೆ ಸೇರಿ ಕೊಲೆ ಮಾಡಿದ್ದು, ಅವರನ್ನ ಸಹ ಬಂಧಿಸಲಾಗಿದೆ. ಇನ್ನೂ ಕೊಲೆ ಮಾಡಿದಾಗ ಈ ಮೂವರು ಆರೋಪಿಗಳು 14-15 ವರ್ಷದವರಾಗಿದ್ದರು. ಇನ್ನೂ ಕೊಲೆ ಪ್ರಕರಣದಲ್ಲಿ ಆರೋಪಿಗಳು ಸುಳಿವು ಸಿಗಲಿಲ್ಲ ಅಂತ ಪೊಲೀಸರು ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನ ಸಹ ಸಲ್ಲಿಕೆ ಮಾಡಿದ್ದರು. ಆದರೆ ಈಗ ಬೆರಳಚ್ಚುಗಳ ಮೂಲಕ ಕೊಲೆಗಡುಕರು ಸಿಕ್ಕಿಬಿದ್ದಿದ್ದು, ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು