News Karnataka Kannada
Friday, May 03 2024
ಬೆಂಗಳೂರು

ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್

ಕಾಫಿಡೇ ಸಂಸ್ಥಾಪಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಜೀವಂತ ಇದ್ದಾಗ ತಮ್ಮದೇ ಕಾಫಿಡೇ ಶಾಪ್​ವೊಂದಕ್ಕೆ ಹೋಗಿ ಕಾಫಿ ರುಚಿ ನೋಡಿ ಬರುತ್ತಿದ್ದರಂತೆ. ಅಂಥವರ ಸಾಲಿಗೆ ಹೇಮಂತ್ ಬಕ್ಷಿ ಎಂಬುವವರು ಸೇರುತ್ತಾರೆ.
Photo Credit : News Kannada

ಬೆಂಗಳೂರು : ಕಾಫಿಡೇ ಸಂಸ್ಥಾಪಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಜೀವಂತ ಇದ್ದಾಗ ತಮ್ಮದೇ ಕಾಫಿಡೇ ಶಾಪ್​ವೊಂದಕ್ಕೆ ಹೋಗಿ ಕಾಫಿ ರುಚಿ ನೋಡಿ ಬರುತ್ತಿದ್ದರಂತೆ. ಅಂಥವರ ಸಾಲಿಗೆ ಹೇಮಂತ್ ಬಕ್ಷಿ ಎಂಬುವವರು ಸೇರುತ್ತಾರೆ.

ಹೇಮಂತ್ ಬಕ್ಷಿ ಓಲಾ ಕ್ಯಾಬ್ಸ್​ನ ಸಿಇಒ. ಹೊಸದಾಗಿ ನೇಮಕವಾಗಿದ್ದಾರೆ. ಇಂಡೋನೇಷ್ಯಾದ ಯುನಿಲಿವರ್​ನಲ್ಲಿ ಈ ಮೊದಲು ಕೆಲಸ ಮಾಡಿದ್ದವರು. ಈಗ ಒಲಾ ಸಿಇಒ ಆಗಿದ್ದ ಭವೀಶ್ ಅಗರ್ವಾಲ್ ಸ್ಥಾನಕ್ಕೆ ಹೇಮಂತ್ ಬಕ್ಷಿ ಬಂದಿದ್ದಾರೆ.

ಹೇಮಂತ್ ಬಕ್ಷಿ ಹಗಲಿನಲ್ಲಿ ಒಂದು ಕಂಪನಿಯ ಸಿಇಒ, ರಾತ್ರಿಯಲ್ಲಿ ಅವರದ್ದೇ ಕಂಪನಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಪಾತ್ರ ವಹಿಸುತ್ತಾರೆ. ಅದಕ್ಕೆ ಕಾರಣ ಅವರು ಗ್ರಾಹಕರ ಕಷ್ಟಗಳನ್ನು ಕಣ್ಣಾರೆ ಕಾಣುವ ಇರಾದೆ.

ಹೇಮಂತ್ ಬಕ್ಷಿ ಅವರಿಗೆ ವಾಹನ ಚಾಲನೆ ಸೇವಾ ಕ್ಷೇತ್ರ ಹೊಸತು. ಓಲಾ ಕ್ಯಾಬ್ಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ. ವಾರದ ದಿನಗಳಲ್ಲಿ ಸಿಇಒ ಸ್ಥಾನ ಅಲಂಕರಿಸುವ ಅವರು ವಾರಾಂತ್ಯದ ದಿನಗಳಲ್ಲಿ, ಅಂದರೆ ಶನಿವಾರ ಮತ್ತು ಭಾನುವಾರಗಳಂದು ಓಲಾ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಾರೆ.

ಬೆಂಗಳೂರಿನಲ್ಲಿ ನೀವು ಇವರನ್ನು ನೋಡಿದ್ದರೂ ನೋಡಿರಬಹುದು, ನೆನಪಿಸಿಕೊಳ್ಳಿ. ಪ್ರಯಾಣಿಕರಿಗೆ ಎದುರಾಗುವ ಸಮಸ್ಯೆಗಳು, ಕ್ಯಾಬ್ ಚಾಲಕರಿಗೆ ಎದುರಾಗುವ ಸಮಸ್ಯೆಗಳನ್ನು ಇವರು ಪ್ರತ್ಯಕ್ಷವಾಗಿ ಗಮನಿಸುವ ಉದ್ದೇಶದಿಂದ ಹೀಗೆ ಖುದ್ದಾಗಿ ಕ್ಯಾಬ್ ಚಾಲನೆ ಮಾಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು