ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದಲ್ಲಿ ವಿವಿಧ ಪ್ರದೇಶದಲ್ಲಿ ಚುನಾವಣೆ ಸಂಬಂಧಿಸಿ ಸಾರ್ವಜನಿಕ ಸಮಾವೇಶಗಳಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 8.20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಹೊರಡಲಿದ್ದಾರೆ. 10.20ಕ್ಕೆ ಬೀದರ್ ಏರ್ಬೇಸ್ಗೆ ಆಗಮಿಸಿ, 10.25ಕ್ಕೆ ಏರ್ಬೇಸ್ನಿಂದ ಹುಮ್ನಾಬಾದ್ ಕಡೆಗೆ ಪ್ರಯಾಣ ಬೆಳಸಲಿದ್ದಾರೆ. 10.50ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿ, 10.55ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್ನಿಂದ ಹೊರಡಲಿದ್ದಾರೆ. ನಂತರ 11 ಗಂಟೆಯಿಂದ 11:40ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗುತ್ತಾರೆ.
11.40ಕ್ಕೆ ಕಾರ್ಯಕ್ರಮದ ಸ್ಥಳದಿಂದ ಹೆಲಿಪ್ಯಾಡ್ನತ್ತ ಹೊರಟು, 11.45ಕ್ಕೆ ಹೆಲಿಪ್ಯಾಡ್ ತಲುಪಲಿದ್ದಾರೆ. ಬೆಳಗ್ಗೆ 11.50ಕ್ಕೆ MI-17 ಹೆಲಿಕಾಪ್ಟರ್ ಮೂಲಕ ವಿಜಯಪುರದತ್ತ ಪ್ರಯಾಣ ಬೆಳಸಲಿದ್ದಾರೆ. ಮಧ್ಯಾಹ್ನ 12.50ಕ್ಕೆ ವಿಜಯಪುರ ಹೆಲಿಪ್ಯಾಡ್ ತಲುಪಲಿರುವ ಅವರು, 12.55ಕ್ಕೆ ವಿಜಯಪುರ ಹೆಲಿಪ್ಯಾಡ್ನಿಂದ ರಸ್ತೆ ಮೂಲಕ ಪ್ರಯಾಣ ಬೆಳಸಿ, 1 ಗಂಟೆಗೆ ವಿಜಯಪುರದಲ್ಲಿ ಸಮಾವೇಶ ಸ್ಥಳವನ್ನು ತಲುಪಲಿದ್ದಾರೆ. 1 ಗಂಟೆಯಿಂದ 1.40ರವರೆಗೂ ಸಮಾವೇಶದಲ್ಲಿ ಪಾಲ್ಗೊಂಡು, 1.45ಕ್ಕೆ ವಿಜಯಪುರ ಸಮಾವೇಶ ಸ್ಥಳದಿಂದ ಹೊರಡುತ್ತಾರೆ.
ಮಧ್ಯಾಹ್ನ 1.55ಕ್ಕೆ ಹೆಲಿಕಾಪ್ಟರ್ ಮೂಲಕ ಕುಡಚಿಯತ್ತ ಪ್ರಯಾಣ ಬೆಳಸಲಿದ್ದಾರೆ. 2.35ಕ್ಕೆ ಕುಡಚಿ ಹೆಲಿಪ್ಯಾಡ್ಗೆ ಬಂದಿಳಿಯಲಿರುವ ಪ್ರಧಾನಿ ಮೋದಿಯವರು, ಮಧ್ಯಾಹ್ನ 2.40ಕ್ಕೆ ರಸ್ತೆ ಮಾರ್ಗವಾಗಿ ಸಮಾವೇಶ ಸ್ಥಳದತ್ತ ಹೊರಡುತ್ತಾರೆ. 2.45ಕ್ಕೆ ಕುಡಚಿ ಸಮಾವೇಶದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. 2.45ರಿಂದ 3.25ರವರೆಗೆ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ. 3.30ಕ್ಕೆ ಕುಡಚಿ ಸಮಾವೇಶ ಮುಗಿಸಿ, 3.40ಕ್ಕೆ MI-17 ಹೆಲಿಕಾಪ್ಟರ್ನಲ್ಲಿ ಬೆಳಗಾವಿಯತ್ತ ಸಾಗುತ್ತಾರೆ.
ಸಂಜೆ 4.20ಕ್ಕೆ ಬೆಳಗಾವಿ ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿಯವರು, 4.25ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ. 5.30ಕ್ಕೆ HAL ಏರ್ಪೋರ್ಟ್ಗೆ ಬಂದಿಳಿಯಲಿದ್ದು, 5.35ಕ್ಕೆ ಹೆಚ್ಎಎಲ್ನಿಂದ MI-17 ಹೆಲಿಕಾಪ್ಟರ್ ಮೂಲಕ 5.55ಕ್ಕೆ ಬಿಐಇಸಿ ಹೆಲಿಪ್ಯಾಡ್ಗೆ ಆಗಮಿಸುತ್ತಾರೆ. ಸಂಜೆ 6 ಗಂಟೆಗೆ ಹೆಲಿಪ್ಯಾಡ್ನಿಂದ ಮಾಗಡಿ ರಸ್ತೆಗೆ ಬರುತ್ತಾರೆ. 6.18ರಿಂದ 7 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ.
ಸಂಜೆ 7.05ಕ್ಕೆ ಸುಮನಹಳ್ಳಿಯಿಂದ ರಸ್ತೆ ಮೂಲಕ ರಾಜಭವನದತ್ತ ಪ್ರಯಾಣ ಬೆಳಸಲಿದ್ದು, ಸಂಜೆ 7.25ಕ್ಕೆ ರಾಜಭವನ ತಲುಪಲಿದ್ದಾರೆ. ಇಂದು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.