ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದ ‘ಪೇಸಿಎಂ ಪೋಸ್ಟರ್’ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆದರೆ ಈಗ ಈ ಪೇ ಸಿಎಂ ಪ್ರಕರಣದ ಲಾಭವನ್ನು ಪಡೆದುಕೊಂಡ ಆಮ್ ಆದ್ಮಿ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆ ಕಾಂಗ್ರೆಸ್ ಪಕ್ಷದ ಕ್ಯೂಆರ್ ಕೋಡ್ ಜೊತೆಗೂಡಿಸಿ ಪೋಸ್ಟರ್ಗೆ ಕಾಮೆಂಟ್ಗಳನ್ನು ನೀಡುತ್ತಿದೆ. ಕೂಡ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟರ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಜನರು ಕಮೆಂಟ್ ಮಾಡುತ್ತಿದ್ದು ಅವರ ಅವರ ಇಷ್ಟದ ಪಕ್ಷದ ಪರವಾಗಿ ಪರ ವಿರೋಧದ ಕಾಮೆಂಟ್ಗಳು ಬರುತ್ತಿವೆ.
ಎಕ್ಸ್ ಸಿಎಂ ಫೋಟೋ ಹಾಕೋಕೆ ಭಯನಾ?, ಕುಡುಕ ಸಿಎಂ ಬಗ್ಗೆನೂ ಹೇಳಿ ಸ್ವಾಮಿ, ನಿಮ್ಮ ಪಕ್ಷದವರು ಏನೂ ಆಗಿಲ್ಲ ಇವಾಗಲೇ ಭಾರಿಗೆ ಹಚ್ಚಿ ಬಳಿತಿದ್ದಾರೆ ಬಿಡಿ?, ಜರ್ಮನಿಯಲ್ಲಿ ಪಂಜಾಬ್ ಸಿಎಂ ಕುಡಿದು ವಿಮಾನ ಹತ್ತಿದ್ದಕ್ಕಾಗಿ ಅವರನ್ನ ವಿಮಾನದೊಳಗೆ ಬಿಡಲಿಲ್ಲ ಎಂತ ನಾಚಿಕೆಗೇಡು. ಮೊದಲು ನಿಮ್ಮ ಪಕ್ಷದ ಬಗ್ಗೆ ನೋಡಿ ‘ಚೀಪ್ ಮಿನಿಸ್ಟರ್ ಆಫ್ ಪಂಜಾಬ್’, ಈ ರೀತಿಯಾಗಿ ಮಾಡಿಕೊಂಡು ಎಎಪಿ ಪಕ್ಷ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ನಾನಂತೂ ಈ ಬಾರಿ ಎಎಪಿಗೆ ಮತ ಹಾಕುವುದಿಲ್ಲ. ನಿಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಿ ನಮಗೆ ಗೊತ್ತಿದೆ ದೆಹಲಿಯಲ್ಲಿ ಏನು ಆಗಿದೆ ಅಂತ.
ಕ್ಯೂಆರ್ ಕೋಡ್ ಪೋಸ್ಟರ್ಗೆ ಸಮಾಜಿಕ ಜಾಲತಾಣದಲ್ಲಿ ಹಲವಾರು ಟೀಕೆ,ಪರ ವಿರೋಧದ ಕಾಮೆಂಟ್ಗಳು ಬರುತ್ತಿದ್ದು, ರಾಜಕೀಯ ವಾರ್ ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದು ಸದ್ಯಕ್ಕೆ ಇರುವ ದೊಡ್ಡ ಸವಾಲಾಗಿದೆ.