ಬೆಂಗಳೂರು:ದೇಶದ ಬೆನ್ನೆಲುಬುರೈತ, ಅನ್ನದಾತ ರೈತ ಎಂದು ಹೇಳುವ ಸರ್ಕಾರ ರೈತರಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಅನ್ನು ಕೊಡುತ್ತಿದ್ದೀರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ವಿಧಾನ ಪರಿಷತ್ನಲ್ಲಿ ಸರ್ಕಾರವನ್ನು ಪ್ರಶ್ನಿಸಿದರು.
ವಿಧಾನ ಪರಿಷತ್ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 3.25 ಲಕ್ಷ ರೈತರ ವಿದ್ಯುತ್ ಪಂಪ್ಸೆಟ್ಗಳಿದ್ದು, ಪ್ರಧಾನಮಂತ್ರಿಗಳ ಕುಸುಮ್ ಯೋಜನೆಯಡಿಯಲ್ಲಿ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡಲು ಒಂದು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ 1100 ಸೌರಶಕ್ತಿಯ ಪ್ರತ್ಯೇಕ ಫೇರ್ ಸ್ಥಾಪನೆ ಮಾಡುವುದಾಗಿ ತಿಳಿಸಿ 5 ತಿಂಗಳಾದರೂ ಆಗಿಲ್ಲ. ಹಾಗಿದ್ದಲ್ಲಿ ಈ ಹಿಂದೆ ರೈತರಿಗೆ ಎಷ್ಟು ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತಿದ್ದೀರಿ. ಇಲ್ಲಿಯವರೆಗೆ ರೈತರಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ನೀಡದೆ ಇರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿ ರೈತರು ಸಾವಿಗೀಡಾಗುತ್ತಿದ್ದಾರೆ. ರೈತರು ಪ್ರತ್ಯೇಕ ಟಿ.ಸಿ.ಗಳಿಗಾಗಿ ಸರ್ಕಾರಕ್ಕೆ ಹಣ ಪಾವತಿಸಿದ್ದುರೂ ಸಹ ಟಿ.ಸಿ. ಕೊಟ್ಟಿಲ್ಲ. ಟಿ.ಸಿ.ಕೊಡದ ಮೇಲೆ ರೈತರಿಗೆ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ಅನ್ನು ಹೇಗೆ ಸರಬರಾಜು ಮಾಡುತ್ತೀರಿ? ನಿಮ್ಮ ಸರ್ಕಾರ ಇರುವುದು ಇನ್ನು 3 ತಿಂಗಳು ಮಾತ್ರ ಅಷ್ಟರಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಸೌರಶಕ್ತಿಯ ವಿದ್ಯುತ್ ಕೊಡಲು ಸಾಧ್ಯವೆ ಎಂದು ಇAಧನ ಸಚಿವರನ್ನು ಪ್ರಶ್ನಿಸಿದ ಅವರು, ಇದು ರೈತರಿಗೆ ಆಸೆ ತೋರಿಸುವ ಚುನಾವಣಾತಂತ್ರ ಎಂದರು.
ಮAಜೇಗೌಡರ ಪ್ರಶ್ನೆಗೆ ಇಂಧನ ಸಚಿವರು ಉತ್ತರಿಸಿ ರೈತರಿಗೆ ಮುಂದಿನ ದಿನಗಳಲ್ಲಿ ಗುಣಮಟ್ಟದ ವಿದ್ಯುತ್ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದರು.