ಬೆಂಗಳೂರು: ನಾವು ಕೈಕಟ್ಟಿ ಕುಳಿತಿಲ್ಲ. ಅಗತ್ಯ ಬಿದ್ದರೆ ಯೋಗಿ ಮಾದರಿ ಕರ್ನಾಟಕದಲ್ಲೂ ಜಾರಿಗೆ ಬರುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ಈ ಶಕ್ತಿ ತಲೆ ಎತ್ತಿದೆ. ಸ್ಲೀಪರ್ ಸೆಲ್ ನಲ್ಲಿರುವ ಉಗ್ರರನ್ನು ಜೈಲಿಗೆ ಕಳಿಸುವ ಕೆಲಸವನ್ನು ನಮ್ಮ ದಕ್ಷ ಪೊಲೀಸರು ಮಾಡಿದ್ದಾರೆ.
ಪ್ರವೀಣ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಐದು ತಂಡ ಮಾಡಲಾಗಿದೆ. ಹರ್ಷನ ಕೊಲೆ ಪ್ರಕರಣದಲ್ಲಿ ತಕ್ಷಣ ದಸ್ತಗಿರಿ ಮಾಡಿದಂತೆ ಇಲ್ಲೂ ಆಗುತ್ತದೆ. ಇಂತ ಚಟುವಟಿಕೆ ವಿರುದ್ಧ ದೊಡ್ಡ ಸಮರ ಸಾರಿದ್ದೇವೆ. ಇದರ ಪರಿಣಾಮ ಜನರಿಗೆ ಮುಂದೆ ಗೊತ್ತಾಗುತ್ತದೆ ಎಂದು ಹೇಳಿದರು.
ಕಠಿಣ ಕ್ರಮದ ಸರ್ಕಾರ ಎಂದು ಜನ ಟೀಕಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ನಾವು ಬಾಯಿಮಾತಲ್ಲಿ ಹೇಳಲ್ಲ, ಮಾಡಿ ತೋರಿಸಿದ್ದೇವೆ. ಶಿವಮೊಗ್ಗದಲ್ಲಿ, ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಮಾಡಿದ್ದೇವೆ ಎಂದರು.
ನಿಮ್ಮ ಸರ್ಕಾರಕ್ಕೆ ನೀವು ಎಷ್ಟು ಅಂಕ ಎಷ್ಟುಕೊಡುತ್ತೀರಿ ಎಂಬ ಪ್ರಶ್ನೆಗೆ ಜನ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ ಎಂದರು.