ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆ ಮೊಟಕುಕೊಂಡಿದೆ.
ಯಡಿಯೂರಪ್ಪ ಯಾತ್ರೆ ಅಂಗವಾಗಿ ಮೂಡಿಗೆರೆ ಭೇಟಿ ನೀಡಿದ್ದು, ಈ ವೇಳೆ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೇಟ್ ನೀಡಬಾರದು ಎಂದು ಒಂದು ಗುಂಪು ಅವರನ್ನು ತಡೆದಿದೆ. ಸಿ.ಟಿ. ರವಿ ಬೆಂಬಲಿಗರೂ ಈ ಒತ್ತಾಯ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆಯಿಂದ ವಿಚಲಿತರಾದ ಯಡಿಯೂರಪ್ಪಅಲ್ಲಿಂದ ಹಿಂತಿರುಗಿದರು. ಇದು ರೋಡ್ಶೋ ರದ್ದಿಗೆ ಕಾರಣವಾಯಿತು. ಅಲ್ಲೇ ಇದ್ದ ರವಿ ಅವರು ತಮ್ಮ ಬೆಂಬಲಿಗರ ಜೊತೆ ಇನ್ನೊಂದು ಬದಿಗೆ ತೆರಳಿದರು.
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು ಇತ್ತೀಚೆಗೆ ತಮ್ಮ ಪುತ್ರ ಬಿ.ವೈ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಹೇಳಿಕೆಯನ್ನು ರವಿ ತಳ್ಳಿ ಹಾಕಿದ್ದರು.