ಬೆಂಗಳೂರು: ಬೆಂಗಳೂರು ಸ್ಟಾರ್ಟ್ ಅಪ್ ಸಿಇಒ ಸುಚನಾ ಸೇಠ್ ಪ್ರಕರಣ ಕೆದಕಿದಷ್ಟು ಸತ್ಯಾಂಶ ಬಯಲಾಗುತ್ತಿದೆ. ಇದೀಗ ಸುಚನಾ ಗೋವಾದಿಂದ ಬೆಂಗಳೂರಿಗೆ ಹೋಗಲು 30 ಸಾವಿರ ರೂಪಾಯಿಗೆ ಟ್ಯಾಕ್ಸಿ ಬುಕ್ ಮಾಡಿದ್ದರು ಎಂದು ಮಾಹಿತಿ ಲಭಿಸಿದೆ.
ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಹೋಟೆಲ್ಗೆ ಜ. 6ರಂದು ತೆರಳಿದ ಸುಚನಾ ಸೇಠ್ ಅವರು ತನ್ನ ಮಗನೊಂದಿಗೆ ಸರ್ವಿಸ್ ಅಪಾರ್ಟ್ಮೆಂಟ್ಗೆ ಹೋಗಿದ್ದಾರೆ. ಜನವರಿ 7ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್ ಸಿಬ್ಬಂದಿಗೆ ತಾನು ಚೆಕ್ ಔಟ್ ಮಾಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾನು ಬೆಂಗಳೂರಿಗೆ ಹೋಗಬೇಕು ಒಂದು ಕ್ಯಾಬ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ನಂತರ 30 ಸಾವಿರ ರೂಪಾಯಿಗೆ ಟ್ಯಾಕ್ಸಿ ಬುಕ್ ಮಾಡಲಾಗುತ್ತೆ. ಮಧ್ಯರಾತ್ರಿ 1.30ರ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್ನಿಂದ ತನ್ನ ಲಗೇಜ್ ಬ್ಯಾಗ್ನ ಜೊತೆ ಚೆಕ್ಔಟ್ ಮಾಡಿದ್ದಾರೆ. ಕ್ಯಾಬ್ ಚಾಲಕ ಸುಚನಾ ಸೇಠ್ ಅವರ ಲಗೇಜ್ ಬ್ಯಾಗ್ ಅನ್ನು ಕಾರಿನ ಒಳಗೆ ಇಡಲು ಸಹಾಯ ಮಾಡಿದ್ದಾನೆ. ಆಗ ಆ ಬ್ಯಾಗ್ ಅವನಿಗೆ ಹೆಚ್ಚು ಭಾರ ಇರೋ ಅನುಭವವಾಗಿದೆ. ಆದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಎಂದು ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೋಟೆಲ್ ರೂಮ್ನಲ್ಲಿ ಕೆಲವು ರಕ್ತದ ಕಲೆಗಳು ಕಂಡು ಬಂದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸದ್ಯ ಆರೋಪಿ ಸುಚನಾ ಅವರನ್ನು ಚಿತ್ರದುರ್ಗ ಪೊಲೀಸರಿಂದ ವಶಕ್ಕೆ ಪಡೆದ ಗೋವಾ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸುಚನಾ ಸೇಠ್ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.