News Karnataka Kannada
Friday, May 17 2024
ಬೆಂಗಳೂರು ನಗರ

ಕೊಲೆ ಪ್ರಕರಣ: 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ಕಿಂಗ್‌ ಮಾಡಿದ ಸುಚನಾ ಸೇಠ್

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪೆನಿ ಹೊಂದಿದ್ದ ಸಿಇಒ ಸುಚನಾ ಸೇಠ್(39ವ) ತನ್ನ ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ ನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮುಗಿದು ಬೆಂಗಳೂರಿಗೆ ಇಂದು (ಜ. 10) ಬುಧವಾರ ಕಳುಹಿಸಲಾಗುತ್ತಿದೆ.
Photo Credit : News Kannada

ಬೆಂಗಳೂರು: ಬೆಂಗಳೂರು ಸ್ಟಾರ್ಟ್‌ ಅಪ್‌ ಸಿಇಒ ಸುಚನಾ ಸೇಠ್ ಪ್ರಕರಣ ಕೆದಕಿದಷ್ಟು ಸತ್ಯಾಂಶ ಬಯಲಾಗುತ್ತಿದೆ. ಇದೀಗ ಸುಚನಾ ಗೋವಾದಿಂದ ಬೆಂಗಳೂರಿಗೆ ಹೋಗಲು 30 ಸಾವಿರ ರೂಪಾಯಿಗೆ ಟ್ಯಾಕ್ಸಿ ಬುಕ್ ಮಾಡಿದ್ದರು ಎಂದು ಮಾಹಿತಿ ಲಭಿಸಿದೆ.

ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್‌ಗೆ ಜ. 6ರಂದು ತೆರಳಿದ ಸುಚನಾ ಸೇಠ್ ಅವರು ತನ್ನ ಮಗನೊಂದಿಗೆ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ. ಜನವರಿ 7ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್ ಸಿಬ್ಬಂದಿಗೆ ತಾನು ಚೆಕ್‌ ಔಟ್‌ ಮಾಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಾನು ಬೆಂಗಳೂರಿಗೆ ಹೋಗಬೇಕು ಒಂದು ಕ್ಯಾಬ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ನಂತರ 30 ಸಾವಿರ ರೂಪಾಯಿಗೆ ಟ್ಯಾಕ್ಸಿ ಬುಕ್ ಮಾಡಲಾಗುತ್ತೆ. ಮಧ್ಯರಾತ್ರಿ 1.30ರ ಸುಮಾರಿಗೆ ಸುಚನಾ ಸೇಠ್ ಅವರು ಹೋಟೆಲ್‌ನಿಂದ ತನ್ನ ಲಗೇಜ್ ಬ್ಯಾಗ್‌ನ ಜೊತೆ ಚೆಕ್‌ಔಟ್ ಮಾಡಿದ್ದಾರೆ. ಕ್ಯಾಬ್ ಚಾಲಕ ಸುಚನಾ ಸೇಠ್ ಅವರ ಲಗೇಜ್ ಬ್ಯಾಗ್‌ ಅನ್ನು ಕಾರಿನ ಒಳಗೆ ಇಡಲು ಸಹಾಯ ಮಾಡಿದ್ದಾನೆ. ಆಗ ಆ ಬ್ಯಾಗ್ ಅವನಿಗೆ ಹೆಚ್ಚು ಭಾರ ಇರೋ ಅನುಭವವಾಗಿದೆ. ಆದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಎಂದು ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೋಟೆಲ್ ರೂಮ್‌ನಲ್ಲಿ ಕೆಲವು ರಕ್ತದ ಕಲೆಗಳು ಕಂಡು ಬಂದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸದ್ಯ ಆರೋಪಿ ಸುಚನಾ ಅವರನ್ನು ಚಿತ್ರದುರ್ಗ ಪೊಲೀಸರಿಂದ ವಶಕ್ಕೆ ಪಡೆದ ಗೋವಾ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸುಚನಾ ಸೇಠ್ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು