ಬೆಂಗಳೂರು: ಕೈಮಗ್ಗದಿಂದ ಉತ್ಪಾದನೆ ಹೆಚ್ಚಬೇಕು ಮತ್ತು ಅದರ ಪ್ರಯೋಜನ ನೇಕಾರರಿಗೆ ತಲುಪಿ ‘ಆತ್ಮ ನಿರ್ಭರ ಭಾರತ’ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿ ಹಾಗೂ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಕೈಮಗ್ಗ ಸ್ವಾವಲಂಬನೆಯ ಪ್ರತೀಕ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದೆ. ಬ್ರಿಟನ್ನಿನ ಗಿರಣಿಗಳಲ್ಲಿ ಜವಳಿ ತಯಾರಕರ ವಿರುದ್ಧ ಹೋರಾಟವಾಗಿ ಜನರು ತಮ್ಮ ಬಟ್ಟೆಗಳನ್ನು ತಾವೇ ನೇಯಲು ರಾಷ್ಟ್ರೀಯ ಕರೆಯನ್ನು ಮಹಾತ್ಮಾ ಗಾಂಧಿ ನೀಡಿದ್ದರು. ಬೊಮ್ಮಾಯಿ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಉದ್ಯೋಗಾವಕಾಶವಿರುವ ಕ್ಷೇತ್ರವಾಗಿದೆ.
ಕೈಮಗ್ಗಕ್ಕೆ ಆದ್ಯತೆ
ರಾಜ್ಯ ಮತ್ತು ಕೇಂದ್ರ ಸರಕಾರ ನೇಕಾರರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಕೈಮಗ್ಗ ಕ್ಷೇತ್ರಕ್ಕೂ ತಂತ್ರಜ್ಞಾನ ಪ್ರವೇಶಿಸಿದೆ. ನಮ್ಮ ದೇಶದಲ್ಲೇ ಉತ್ಪಾದನೆಯಾಗುವ ಉತ್ಪನ್ನಗಳನ್ನು ಬಳಸಿದರೆ ‘ಆತ್ಮ ನಿರ್ಭರ್’ ಎಂಬ ಧ್ಯೇಯವಾಕ್ಯ ಅರ್ಥಪೂರ್ಣವಾಗುತ್ತದೆ ಮತ್ತು ಕಾರ್ಮಿಕರಿಗೆ ಅನುಕೂಲವಾಗುತ್ತದೆ. ನಾವು ನೇಕಾರರ ಕುಟುಂಬದ ಮಕ್ಕಳಿಗಾಗಿ ‘ವಿದ್ಯಾ ನಿಧಿ’ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ನೇಕಾರ ಸಮ್ಮಾನ್ ಪ್ರಶಸ್ತಿಯನ್ನು 5000 ರೂ.ಗೆ ಹೆಚ್ಚಿಸಲಾಗಿದೆ, ಬಡ್ಡಿ ಮತ್ತು ಸಾಲವನ್ನು ಮನ್ನಾ ಮಾಡಲಾಗಿದೆ. ಇನ್ನಷ್ಟು ಯೋಜನೆಗಳ ಬಗ್ಗೆ ಚಿಂತನೆ ನಡೆದಿದೆ. ಸ್ತ್ರೀ ಶಕ್ತಿ ಗುಂಪುಗಳ ಕಾರ್ಯಕ್ರಮಗಳಲ್ಲಿ ಕೈಮಗ್ಗಕ್ಕೆ ಆದ್ಯತೆ ನೀಡಲಾಗುವುದು. ಈ ಉದ್ದೇಶಕ್ಕಾಗಿ ಕೆನರಾ ಬ್ಯಾಂಕ್ ಅನ್ನು ಆಂಕರ್ ಬ್ಯಾಂಕ್ ಎಂದು ಗೊತ್ತುಪಡಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ನಮ್ಮ ಕೈಮಗ್ಗ ಮತ್ತು ಪವರ್ಲೂಮ್ ಉತ್ಪನ್ನಗಳು ವಿದೇಶಿ ಜವಳಿ ಉತ್ಪನ್ನಗಳಿಗೆ ಪೈಪೋಟಿ ನೀಡಿದರೆ, ಗಾಂಧೀಜಿ ಅವರ ಕನಸು ಮತ್ತು ಪ್ರಧಾನಿ ಮೋದಿ ಅವರ ‘ಆರ್ಮ ನಿರ್ಭರ್’ ಧ್ಯೇಯವು ನನಸಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.