ಬೆಂಗಳೂರು: ಯಶಸ್ಸಿಗಿಂತ ಸಾಧನೆ ಮುಖ್ಯ. ನಿಮ್ಮ ಸಾಧನೆಯು ಇನ್ನೂ ಅನೇಕರನ್ನು ಯಶಸ್ಸಿನ ಹಾದಿಯನ್ನು ತುಳಿಯಲು ಪ್ರೇರೇಪಿಸುತ್ತದೆ. ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬ್ಯಾರಿಸ್ಟರ್ ಆರ್.ದಯಾನಂದ ಸಾಗರ್ ಅವರ ಜನ್ಮಶತಮಾನೋತ್ಸವದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಮಾತನಾಡಿ, ದಯಾನಂದ ಸಾಗರ್ ಅವರು ಆರಂಭಿಸಿರುವ ಸಂಸ್ಥೆಗಳನ್ನು ಬೆಳೆಸಬೇಕು. ಬೇರುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದರು.
ಯಶಸ್ಸಿಗಿಂತ ಸಾಧನೆ ಮುಖ್ಯ. ದಯಾನಂದ ಸಾಗರ್ ಸಾಧಕರು. ಅವರ ಇಬ್ಬರು ಪುತ್ರರು ತಮ್ಮ ತಂದೆ ಹಾಕಿಕೊಟ್ಟ ಬುನಾದಿಯ ಮೇಲೆ ಶೈಕ್ಷಣಿಕ ಸಂಸ್ಥೆಗಳ ಸಾಮ್ರಾಜ್ಯವನ್ನು ಕಟ್ಟಿರುವುದು ಸಂತಸ ತಂದಿದೆ ಎಂದು ಬೊಮ್ಮಾಯಿ ಹೇಳಿದರು.