ಬೆಂಗಳೂರು: ಕನಪುರದಲ್ಲಿ ಡಿ.ಕೆ. ಶಿವಕುಮಾರ್ ಸಹಸ್ರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಅಭಿಮಾನಿಗಳು ನಿಷ್ಠಯೋಗಿ ಎಂಬ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ದಣಿವರಿಯದ ನಾಯಕ, ರಕ್ಷಣೆಯ ಕಾಯಕ’ ಎಂದು ಶುರುವಾಗುವ ಈ ಹಾಡನ್ನು ಶಿವಕುಮಾರ್ ಅವರ ಅಭಿಮಾನಿಗಳು ರಿಲೀಸ್ ಮಾಡಿದ್ದು, ಡಿಕೆಶಿ ಅವರ ರಾಜಕೀಯ ಜೀವನ ಪಕ್ಷನಿಷ್ಠೆ ಕುರಿತು ವೈರಲ್ ಪದ್ಯದಲ್ಲಿ ವಿವರಣೆಯಿದೆ. ಅದರ ಸಾಹಿತ್ಯ ಹೀಗಿದೆ.
ಡಿ.ಕೆ. ಶಿವಕುಮಾರ್ ಡಿಕೆಶಿ. ಡಿಕೆಶಿ. ದಣಿವರಿಯದ ನಾಯಕ… ರಕ್ಷಣೆಯೆ ಕಾಯಕ. ಕನಕಪುರದ ಬಂಡೆ ಕರ್ನಾಟಕಕೆ ಭದ್ರವಾಗಿರೋ ದಂಡೆ. ಡಿ.ಕೆ ಶಿವಕುಮಾರ್… ಡಿ.ಕೆ ಶಿವಕುಮಾರ್… ಬೆದರಿಕೆಗೆ ಜಗ್ಗಲಿಲ್ಲ. ಬಂಧನದಿಂದ ಕುಗ್ಗಲಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಇವರದೇನೆ ಅಬ್ಬರ. ಕಾಂಗ್ರೆಸ್ಗೆ ನಿಷ್ಠೆ ಕರ್ನಾಟಕಕ್ಕೆ ಪ್ರತಿಷ್ಠೆ. ಜನರ ಕಾಯೋ ಧಮನಿ ಒರೆಸುತಾರೆ ನೊಂದವರ ಕಂಬನಿ. ನಿಮ್ಮೊಂದಿಗೆ ನಿಲ್ಲುವ ಕರುನಾಡಿನ ನಿಷ್ಠಯೋಗಿ. ಡಿ. ಕೆಶಿವಕುಮಾರ್ ಎಂದು ಹಾಡಿನ ಸಾಹಿತ್ಯವಿದೆ. ಕೊನೆಯಲ್ಲಿ ಮತ್ತೆ ಘರ್ಜಿಸಲಿದೆ ಕರ್ನಾಟಕ ಎಂಬ ಒಕ್ಕಣೆಯಿದೆ.
https://www.facebook.com/DK4CM/videos/1711376005985269/?t=16