News Karnataka Kannada
Friday, May 17 2024
ಬೆಂಗಳೂರು ನಗರ

ಬಂಧನಕ್ಕೆ ಕುಗ್ಗಲಿಲ್ಲ: ಡಿಕೆಶಿ ನಾಮಪತ್ರ ಸಲ್ಲಿಕೆ ವೇಳೆ ವೈರಲ್‌ ಆಯ್ತು ಹಾಡು

'Nishthayogi' song goes viral during DK's nomination
Photo Credit : News Kannada

ಬೆಂಗಳೂರು: ಕನಪುರದಲ್ಲಿ ಡಿ.ಕೆ. ಶಿವಕುಮಾರ್‌ ಸಹಸ್ರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಅಭಿಮಾನಿಗಳು ನಿಷ್ಠಯೋಗಿ ಎಂಬ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ವೈರಲ್‌ ಆಗಿದೆ.

ದಣಿವರಿಯದ ನಾಯಕ, ರಕ್ಷಣೆಯ ಕಾಯಕ’ ಎಂದು ಶುರುವಾಗುವ ಈ ಹಾಡನ್ನು ಶಿವಕುಮಾರ್ ಅವರ ಅಭಿಮಾನಿಗಳು ರಿಲೀಸ್ ಮಾಡಿದ್ದು, ಡಿಕೆಶಿ ಅವರ ರಾಜಕೀಯ ಜೀವನ ಪಕ್ಷನಿಷ್ಠೆ ಕುರಿತು ವೈರಲ್‌ ಪದ್ಯದಲ್ಲಿ ವಿವರಣೆಯಿದೆ. ಅದರ ಸಾಹಿತ್ಯ ಹೀಗಿದೆ.

ಡಿ.ಕೆ. ಶಿವಕುಮಾರ್‌ ಡಿಕೆಶಿ. ಡಿಕೆಶಿ. ದಣಿವರಿಯದ ನಾಯಕ… ರಕ್ಷಣೆಯೆ ಕಾಯಕ. ಕನಕಪುರದ ಬಂಡೆ ಕರ್ನಾಟಕಕೆ ಭದ್ರವಾಗಿರೋ ದಂಡೆ. ಡಿ.ಕೆ ಶಿವಕುಮಾರ್‌… ಡಿ.ಕೆ ಶಿವಕುಮಾರ್‌… ಬೆದರಿಕೆಗೆ ಜಗ್ಗಲಿಲ್ಲ. ಬಂಧನದಿಂದ ಕುಗ್ಗಲಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಇವರದೇನೆ ಅಬ್ಬರ. ಕಾಂಗ್ರೆಸ್‌ಗೆ ನಿಷ್ಠೆ ಕರ್ನಾಟಕಕ್ಕೆ ಪ್ರತಿಷ್ಠೆ. ಜನರ ಕಾಯೋ ಧಮನಿ ಒರೆಸುತಾರೆ ನೊಂದವರ ಕಂಬನಿ. ನಿಮ್ಮೊಂದಿಗೆ ನಿಲ್ಲುವ ಕರುನಾಡಿನ ನಿಷ್ಠಯೋಗಿ. ಡಿ. ಕೆಶಿವಕುಮಾರ್‌ ಎಂದು ಹಾಡಿನ ಸಾಹಿತ್ಯವಿದೆ. ಕೊನೆಯಲ್ಲಿ ಮತ್ತೆ ಘರ್ಜಿಸಲಿದೆ ಕರ್ನಾಟಕ ಎಂಬ ಒಕ್ಕಣೆಯಿದೆ.

https://www.facebook.com/DK4CM/videos/1711376005985269/?t=16

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು