ಬೆಂಗಳೂರು, ಆ.16: ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ನಾವು ಉಪಯೋಗಿಸುವ ಎಣ್ಣೆಯೂ ಅಷ್ಟೇ ಪ್ರಮುಖವಾಗಿದ್ದು ಸಾಂಪ್ರದಾಯಿಕ ವಿಧಾನವಾದ ಮರದ ಗಾಣ ಬಳಸಿ ಉತ್ಪಾದಿಸುವ ಎಣ್ಣೆಗಳನ್ನು ಬಳಸುವ ಅಭ್ಯಾಸ ಒಳ್ಳೆಯದು ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.
ನಾಗರಬಾವಿಯಲ್ಲಿ ನಿರ್ಮಿಸಲಾಗಿರುವ ಸಪ್ತಮ್ ಸಂಸ್ಥೆಯ ನಾಲ್ಕನೇ ನೂತನ ಶಾಖೆಯನ್ನು ಭಾನುವಾರ ಆಗಸ್ಟ್ 14ರಂದು ಸಂಸದ ಡಿ.ಕೆ. ಸುರೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಪ್ತಮ್ ಸಂಸ್ಥೆಯ ಸ್ಥಾಪಕ ಸಿಇಒ ಮನೋಹರ್ ಐಯ್ಯರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ಕೆ .ಸುರೇಶ್ ಕುಮಾರ್ ಅವರು “ ಇಂದಿನ ದಿನದಲ್ಲಿ ಎಲ್ಲವೂ ಕಲಬೆರೆಕೆಯಿಂದ ಕೂಡಿದೆ. ಉತ್ತಮವಾದ ಆರೋಗ್ಯ ಹೊಂದಿರಬೇಕೆಂದರೆ ನಾವು ಸೇವಿಸುವ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಉಪಯೋಗಿಸುವ ಎಣ್ಣೆಯೂ ಅಷ್ಟೇ ಪ್ರಮುಖವಾಗಿದೆ. ಇಂದು ಮಾರುಟ್ಟೆಯಲ್ಲಿ ನಾನಾ ರೀತಿಯ ಖಾದ್ಯ ತೈಲಗಳು ಸಿಗುತ್ತವೆ. ಸಾಂಪ್ರದಾಯಿಕ ವಿಧಾನವಾದ ಮರದ ಗಾಣ ಬಳಸಿ ಉತ್ಪಾದಿಸುವ ಎಣ್ಣೆಗಳನ್ನು ಬಳಸುವ ಅಭ್ಯಾಸ ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ” ಎಂದು ಹೇಳಿದರು.
ಸಪ್ತಮ್ ಸಂಸ್ಥೆಯ ಸ್ಥಾಪಕ ಸಿಇಒ ಮನೋಹರ್ ಐಯ್ಯರ್ ಮಾತನಾಡಿ “ ನಾವು ಎಣ್ಣೆ ತಯಾರಿಕೆಯ ಸಮಯದಲ್ಲಿ ನೈಮರ್ಲ್ಯ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಎಣ್ಣೆಯನ್ನು ಉತ್ಪಾದಿಸುತ್ತೇವೆ. ಹಾಗೇ ಸಾಂಪ್ರದಾಯಿಕ ವಿಧಾನವಾದ ಮರದ ಗಾಣ ಬಳಸಿ ಖಾದ್ಯ ತೈಲಗಳನ್ನು ತಯಾರಿಸಲಾಗುತ್ತದೆ. ಇದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗದೆ ಹಾಗೇ ಇರುತ್ತದೆ. ಜೊತೆಗೆ ಈ ರೀತಿಯ ಎಣ್ಣೆಯ ಸೇವನೆಯಿಂದ ಆರೋಗ್ಯಕ್ಕೆ ಕೂಡ ಯಾವುದೇ ಹಾನಿ ಇರುವುದಿಲ್ಲ. ಒಟ್ಟಾರೆ ಸಂಪ್ರದಾಯ, ತಂತ್ರಜ್ಞಾನ ಮತ್ತು ನೂತನ ಸಂಯೋಜನೆ ಇದಾಗಿದೆ” ಎಂದು ತಿಳಿಸಿದರು.