ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ರಾತ್ರಿ ನಗರದ ಕೇಶವ ಕೃಪಾದಲ್ಲಿ ರಾಜ್ಯದ ಹಿರಿಯ ಆರ್ ಎಸ್ಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಆರೋಗ್ಯ ಸಚಿವ ಡಾ.ಸುಧಾಕರ್, ತೋಟಗಾರಿಕೆ ಸಚಿವ ಮುನಿರತ್ನ ಅವರು ಸಿಎಂ ಜೊತೆಗಿದ್ದರು.
ಮೂಲಗಳ ಪ್ರಕಾರ, ಆರ್ ಎಸ್ಎಸ್ ನಾಯಕರು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿನ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಪಡೆದ ಪ್ರತಿಕ್ರಿಯೆಯನ್ನು ವಿನಿಮಯ ಮಾಡಿಕೊಂಡರು. ಬಿಜೆಪಿ ಕಾರ್ಯಕರ್ತರು ಎತ್ತಿರುವ ದೂರುಗಳನ್ನು ಅವರು ಸಿಎಂ ಅವರೊಂದಿಗೆ ಹಂಚಿಕೊಂಡರು.
“ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಬೆದರಿಕೆಯನ್ನು ಆರ್ ಎಸ್ಎಸ್ ನಾಯಕರು ಎತ್ತಿದರು” ಎಂದು ಬಿಜೆಪಿ ಮೂಲಗಳು ವಿವರಿಸಿವೆ.
ಮೂಲಗಳ ಪ್ರಕಾರ, ಮೀಸಲಾತಿಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಬೇಕು ಎಂದು ಆರ್ ಎಸ್ಎಸ್ ನಾಯಕರು ಸಿಎಂಗೆ ಸಲಹೆ ನೀಡಿದ್ದಾರೆ.