ಬೆಂಗಳೂರು: ಫಿಲ್ಮಾಹಾಲಿಕ್ ಫೌಂಡೇಶನ್ ಹಾಗೂ ಅಸ್ಥಿತ್ವ ಚಾರಿಟೇಬಲ್ ಟ್ರಸ್ಟ್ ತಂಡದವರು ಜೊತೆಗೂಡಿ ಆಗಸ್ಟ್ ೨೬ ರಂದು ಬೆಂಗಳೂರಿನಲ್ಲಿ ಮೂರನೇ ವರ್ಷದ ಭಾರತ ಸೇವಾ ರತ್ನ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ ಕಾರ್ಯಕ್ರಮವನ್ನು ಲಲಿತ ಕಲಾ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮಕ್ಕೆ ಹೆಚ್ ಕೆ ವಿವೇಕಾನಂದ, ದಕ್ಷಿಣಾಮೂರ್ತಿ ಬಸವರಾಜ್ ಪಡುಕೋಟೆ ಹಾಗೂ ಹೀನ ಜೈನ್ ರವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಡಾ. ಕೆ ಮಥಾಯ್, ವಿದ್ವಾನ್ ಎ ವಿ ದತ್ತಾತ್ರೇಯ, ಡಾ. ವೈ ಬಿ ಪದ್ಮ ನಾಗರಾಜು, ಪ್ರೊಫೆಸರ್ ಸಮತಾ ದೇಶ್ ಮನೆ, ಸೋನಾ ಗಣೇಶ್ ನಾಯಕ್, ಕವಿತಾ ರಮೇಶ್, ಡಾ. ಏನ್ ಬಿ ಜಯಪ್ರಕಾಶ್, ಡಾ. ಪರಿಸರ ಮಂಜು, ಶಿಕ್ಷಣ್ ತಂಡ, ಟೀಮ್ ಕುಂದಾಪುರಿಯನ್ಸ್ ಬೆಂಗಳೂರು, ಆದರ್ಶ್ ರ್ ಅಯ್ಯರ್ ಹಾಗು ಜೆ ಸ್ ಪಿ ತಂಡ, ಆರ್ ಕಮಲೇಶ್ ರಾವ್, ಕೆ ವಿ ತುಳಸಿ ರಾಮ್, ಹೇಮಾವತಿ ಹೆಚ್ ಪಿ, ನಾಗರಾಜ್ ಗಸ್ತಿ, ಲೋಕೇಶ, ಪೂಜಾ ರಘುನಂದನ್, ಭಾಕರ್ ಅಲಿ, ಪ್ರೀತಿಶ್ ಜಯಪ್ರಕಾಶ್ ಜೆ, ಟಿ ನ್ ರಾಮಮೂರ್ತಿ ರವರಿಗೆ ಸನ್ಮಾನ ಮಾಡಲಾಯಿತು.
ಫಿಲ್ಮಾಹಾಲಿಕ್ ಫೌಂಡೇಶನ್ ತಂಡದವರು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಚರಣ್ ರವರು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದರು, ವಿದ್ವಾನ್ ದತ್ತಾತ್ರೇಯ ರವರು ಮ್ಯಾಂಡೊಲಿನ್ ವಾದ್ಯವನ್ನು ನುಡಿಸಿದರು. ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ತಂಡದವರು ತಮ್ಮ ಗುರುಗಳಾದ ಡಾ. ಸುಪರ್ಣ ವೆಂಕಟೇಶ್ ರವರ ತರಬೇತಿ ಪಡೆದು ಭರತನಾಟ್ಯವನ್ನು ಮಾಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಫಿಲ್ಮಾಹಾಲಿಕ್ ಹಾಗೂ ಅಸ್ಥಿತ್ವ ತಂಡದವರಾದ ಆದಿತ್ಯ, ಕಿಶೋರ್, ವಿಶ್ವ, ಲಕ್ಷ್ಮೀಶ, ರವಿ, ಚರಣ್, ಕೀರ್ತನ್, ಪ್ರಕಾಶ್ ಪುಣೆಕರ್, ಮೊಕಾಶಿ ರವರು ಕಾರ್ಯಕ್ರಮದ ಮುತುವರ್ಜಿ ನಿರ್ವಹಿಸಿದರು. ಮಾಧ್ಯಮ ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಡಿಟೋರಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.