ಬೆಂಗಳೂರು: ಸಮಾಜ ಸಂಘಟನೆ ಯಲ್ಲಿ ಸಕ್ರಿಯ ರಾಗಿರುವ ಯುವ ರಾಜಕೀಯ ಮುಖಂಡ, ಉದ್ಯಮಿ ಡಾ. ಬಿ.ಎಂ. ಉಮೇಶ್ ಕುಮಾರ್ ಅವರ ಬೆಂಬಲಕ್ಕೆ ನಮ್ಮ ವಿಶ್ವಕರ್ಮ ಸಮುದಾಯ ವಿದ್ದು, ಸಮುದಾಯದ ಯುವ ನಾಯಕನಿಗೆ ಅವಕಾಶ ಕಲ್ಪಿಸಿ ಬೆಳೆಸುವವರನ್ನು ಸಮುದಾಯ ಬೆಂಬಲಿಸಲಿದೆ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠಾಧ್ಯಕ್ಷರಾದ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು
ನಗರದಲ್ಲಿ ವಿಶ್ವಕರ್ಮ ನಾಡೋಜ, ಜೆ.ಡಿ.ಎಸ್.ರಾಜ್ಯ ಉಪಾಧ್ಯಕ್ಷ ರಾಗಿ ಡಾ. ಬಿ.ಎಂ.ಉಮೇಶ್ ಕುಮಾರ್ ಅವರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜಕ್ಕೆ ಒಳ್ಳೆಯದು ಮಾಡುವ ರಾಜಕೀಯ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಸಮಾಜಕ್ಕೆ ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯೆ ದೊರೆಯಬೇಕು. ಈ ದಿಸೆಯಲ್ಲಿ ಮಾರ್ಚ್ ನಲ್ಲಿ ವಿಶ್ವಕರ್ಮ ಸಮುದಾಯ ದ ರಾಜ್ಯ ಸಮಾವೇಶ ವನ್ನು ಸಂಘಟಿಸಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ನಾಯಕ ಟಿ.ಎ. ಶರವಣ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ನಂತರ ಯುವ ಸಮೂಹಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಲಿದ್ದಾರೆ. ಉಮೇಶ್ ಕುಮಾರ್ ಅವರಿಗೂ ಸಮುದಾಯ ದ ನಿಗಮದ ಅಧ್ಯಕ್ಷ ಸ್ಥಾನ ಪಕ್ಕಾ ಎಂದು ಭರವಸೆ ನೀಡಿದರು
ವೈದ್ಯಕೀಯ ಶಿಕ್ಷಣ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂ.ಡಿ ಬಿ. ಎಲ್. ವೇದಮೂರ್ತಿ, ವಾಣಿಜ್ಯತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಾಳಿಗಾಚಾರ್ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರ ಜನತಾದಳ ಅಭ್ಯರ್ಥಿ ಕೆ. ವಿ. ಶಂಕರ್ , ಮುಖಂಡ ಕೆ. ಬಾಗೇಗೌಡ ಭಾಗವಹಿಸಿದ್ದರು.
ಕಲಾವಿದೆ ಭವ್ಯ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಕಟ ಪೂರ್ವ ಅಧ್ಯಕ್ಷ ಬಾಬು ಪತಾರ್ ಬೆಂ ನ ಜಿಲ್ಲೆ ಜನತಾದಳ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣ ಸ್ವಾಮಿ, ಬೆಂ ನ ಜಿಲ್ಲೆ ಜನತಾದಳ ಪ್ರಧಾನ ಕಾರ್ಯದರ್ಶಿ ಪಿ.ವಿ.ಎಸ್. ಪ್ರಸಾದ್, ಜೆ.ಡಿ.ಎಸ್. ಬಸವನಗುಡಿ ಅಧ್ಯಕ್ಷ ಎಂ.ರಾಜು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶ್ರೀ ಹೊನ್ನಪ್ಪಾಚಾರ್ ಮುಂತಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.