News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಸಮಾಜದೊಳಗಿನ ಸೈನಿಕರಾದ ಪೊಲೀಸ್‌ ಮಕ್ಕಳಿಗೂ ಮೀಸಲಾತಿ ಸಿಗಲಿ- ಡಾ ವಿಕ್ರಂ ಸಿದ್ದಾರೆಡ್ಡಿ

Beng
Photo Credit : By Author

ಬೆಂಗಳೂರು: ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಸೇವೆ ಅವಿಸ್ಮರಣೀಯ. ಇದರ ಜತೆಗೆ ಸಮಾಜದೊಳಗಿನ ಸೈನಿಕರಾಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಮತ್ತವರ ಕುಟುಂಬದವರಿಗೂ ಸೈನಿಕರ ಸೌಲಭ್ಯಗಳು ಸಿಗುವುದು, ನ್ಯಾಯಸಮ್ಮತ ಎಂದು ಯುನೈಟೆಡ್‌ ಆಸ್ತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ ಸಿದ್ದಾರೆಡ್ಡಿ ಅಭಿಪ್ರಾಯಪಟ್ಟರು.

ಕಲಬುರಗಿಯ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ, ಹುತಾತ್ಮ ಸ್ಮಾರಕಕ್ಕೆ ಪುಷ್ಟ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಮಾಜ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮತ್ತು ಸುರಕ್ಷತೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರ ಯೋಗದಾನ ಅಪಾರವಿದೆ. ಸಮಾಜಕ್ಕಾಗಿ, ಮತ್ತೊಬ್ಬರ ಜೀವಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಪೊಲೀಸರ ಬಗ್ಗೆ ಸಮಾಜಕ್ಕೂ ಹೆಮ್ಮೆ ಗೌರವಾದರ ಇರಬೇಕು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಆತ್ಮಸ್ಥೆರ್ಯ ತುಂಬುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಜನರ ಜೀವನದ ಜತೆಗೆ ಆಸ್ತಿಪಾಸ್ತಿ ಸಂರಕ್ಷಣೆಗಾಗಿ ಅವಿರತವಾಗಿ ಸೇವೆ ಸಲ್ಲಿಸುವ ಪೊಲೀಸರ ಮಕ್ಕಳಿಗೆ ಸೇವೆ ಮಾದರಿಯಲ್ಲಿ ಉನ್ನತ ವೃತ್ತಿಪರ ಶಿಕ್ಷಣ ಮತ್ತು ನೇಮಕದಲ್ಲಿ ಮೀಸಲಾತಿ ಸೌಲಭ್ಯಗಳು ಸಿಗುವ ಅಗತ್ಯವಿದೆ. ಮೆಡಿಕಲ್, ಇಂಜಿನಿಯರಿಂಗ ಇತರೆ ವೃತ್ತಿಪರ ಕೋರ್ಸ್‌ ಪ್ರದೇಶದಲ್ಲಿ ಪೊಲೀಸರ ಮಕ್ಕಳಿಗೆ ಕೋಟಾ ಇಡಬೇಕು. ಸರ್ಕಾರದ ವಿವಿಧ ನೇಮಕಾತಿಗಳಲ್ಲೂ ಮೀಸಲಾತಿ ಕಲ್ಪಿಸಬೇಕು. ಇದು ಪೊಲೀಸರಿಗೆ ಇನ್ನಷ್ಟು ನೈತಿಕ ಬಲ ತುಂಬಲಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು