ಬೆಂಗಳೂರು : ಅವರು ಹಲಾಲ್ ಮಾಡಿ ಉಗಿದ ಮಾಂಸವನ್ನು ನಾವು ತಿನ್ನಬೇಕಾ ಎಂಬುದಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಅಲ್ಲದೇ ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯುಲು ಮುಂದೆ ಬಂದ್ರೇ, ನಾನೇ ಹಣಕಾಸಿನ ಸಹಾಯ ಮಾಡುವೆ ಎಂಬುದಾಗಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ CM ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾತನಾಡಿ, ಇಜಾಬ್ ಹಿಂದೆ ಜಮೀರ್ ಅಹಮದ್ ಖಾನ್, ಖಾದರ್ ರಂತಹ ಕಿಡಿಗೇಡಿಗಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಮುಖಂಡರಿಗೆ ಎಲ್ಲಾ ಘಟನೆಗಳಿಂದ ಮರ್ಮಾಘಾತ ಆಗಿದೆ. ಹಿಜಾಬ್, ಭಗವದ್ಗೀತೆ, ಕಾಶ್ಮೀರ ಫೈಲ್ಸ್ ಇಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮರ್ಮಾಘಾತವಾಗಿದೆ. ಇದೇ ರೀತಿ ಹೋದ್ರೆ ರಾಜ್ಯದಲ್ಲಿ ಕಾಂಗ್ರೆಸ್ 40-50 ಸೀಟು ಬರಲ್ಲ ಎಂದರು.
ಮುಸ್ಲೀಂ ಸಮುದಾಯದ ಮಾಂಸದ ಅಂಗಡಿಗಳಲ್ಲಿ, ಅವರು ಹಲಾಲ್ ಮಾಡಿ ಉಗಿದ ಮಾಂಸವನ್ನ ನಾವು ತಿನ್ಬೇಕಾ? ಎಂದು ಅವರು, ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೆ ನಾನೇ ಸಹಾಯ ಮಾಡುವೆ ಎಂದು ಘೋಷಿಸಿದರು.