ಬೆಂಗಳೂರು: ರಾಜ್ಯದಲ್ಲಿ ಸಿಡಿಲಿನಾಘಾತಕ್ಕೆ ಮೂರು ಮಂದಿ ಬಲಿಯಾಗಿರುವ ಘಟನೆಯು ನಡೆದಿದೆ.
ಗೋಕರ್ಣದ ದೆವನದಲ್ಲಿ ಶೋಭಾ ಚಂದ್ರಕಾಂತ ಗೌಡ(37) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ಮಾಲವ್ವ ಮಂಜಪ್ಪ ನಾಯ್ಕರ್(57) ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಬಸಯ್ಯ ಮುಚಕಂಡಿ(67) ಅವರು ಸಿಡಿಲಿನಾಘಾತಕ್ಕೆ ಬಲಿಯಾಗಿರುವರು.
ಭಾನುವಾರ ರಾತ್ರಿ ವೇಳೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯಾಗಿದೆ.