ಬೆಂಗಳೂರು: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಸಿದ್ಧ ಸರೋದ್ ವಾದಕ ರಾಜೀವ್ ತಾರನಾಥ್ ಅವರಿಗೆ ನಾಡೋಜ ಗೌರವ ನೀಡಲು ತೀರ್ಮಾನಿಸಿದೆ.
ತಾರಾನಾಥ್ ಅವರಿಗೆ ನಾಡೋಜ ಗೌರವ ನೀಡಲು ರಾಜ್ಯಪಾಲರು ಸಮ್ಮತಿಸಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಹೇಳಿದರು.
1932, ಅಕ್ಟೋಬರ್ 17ರಂದು ಜನಿಸಿದ್ದ ರಾಜೀವ್ ತಾರಾನಾಥ್ ಅವರು ಇಪ್ಪತ್ತರ ಹರೆಯದಲ್ಲೇ ಕಾರ್ಯಕ್ರಮಗಳು ನೀಡಿ ಜನಪ್ರಿಯರಾಗಿದ್ದರು. ಇವರು ಸಂಗೀತದಲ್ಲಿ ಪಿಎಚ್ ಡಿ ಪದವಿ ಪಡೆದುಕೊಂಡಿದ್ದಾರೆ.