ಬೆಂಗಳೂರು: ವಿಜಯಪುರ ಜಿಲ್ಲೆಯ ಬೂದಿಗಾಳದ ಪಿ.ಎಚ್.ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅನಿಲ ಇಂಗಳಗಿ(28) ಎಂಬಾತನ ಹತ್ಯೆ ಮಾಡಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಖಂಡಿಸಿರುವರು.
ದೇವಸ್ಥಾನದ ಕಟ್ಟೆಯಲ್ಲಿ ತಮಗೆ ಸರಿಸಮನವಾಗಿ ಕುಳಿತ್ತಿದ್ದಾನೆ ಎನ್ನುವ ಕಾರಣಕ್ಕಾಗಿ ಕಾರಣಕ್ಕಾಗಿ ಅನಿಲ ಇಂಗಳಗಿ ಎಂಬಾತನನ್ನು ಹತ್ಯೆ ಮಾಡಲಾಗಿತ್ತು.
ವಿಜಯಪುರದ ಸಿಂದಗಿಯಲ್ಲಿ ನಡೆದ ದಲಿತ ಯುವಕನ ಹತ್ಯೆ ಹೇಯ ಕೃತ್ಯ ಮತ್ತು ಇದು ಮನುಷ್ಯರೇ ತಲೆತಗ್ಗಿಸುವಂತದ್ದಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿರುವರು.