ಬೆಂಗಳೂರು :ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಟೊಮೆಟೋ ,ಈರುಳ್ಳಿ ಬೀನ್ಸ್ ಸೇರಿದಂತೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಬದನೆಕಾಯಿ 80 ರೂ.ಗೆ ಏರಿಕೆಯಾಗಿದೆ. ಟೊಮೆಟೋ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕೆಜಿ ಟೊಮೆಟೋ ಬೆಲೆ 120 ರೂ.ಗೆ ಏರಿಕೆಯಾಗಿದೆ. ಒಂದು ಕೆಜಿ ನವೀಲುಕೋಸು 100 ರೂ. ಇದ್ದರೆ, ಬೀನ್ಸ್ 90 ರೂ. ಮೂಲಂಗಿ 80 ರೂ. ಕ್ಯಾಪ್ಸಿಕಂ 80 ರೂ. ಹೀರೆಕಾಯಿ 80 ರೂ. ಸೋರೆಕಾಯಿ 80 ರೂ.ಗೆ ಏರಿಕೆಯಾಗಿದೆ.