ಬೆಂಗಳೂರು : ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಟೊಮೆಟೋ, ಈರುಳ್ಳಿ, ಬೀನ್ಸ್ ಸೇರಿದಂತೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಕಳೆದ ತಿಂಗಳು ಬೆಲೆ ಇಳಿಕೆಯಾಗಿದ್ದ ಟೊಮೇಟೊ ಬೆಲೆಯಲ್ಲಿ ಇದೀಗ ಭಾರೀ ಏರಿಕೆಯಾಗಿದ್ದು, ಕೆ.ಜಿಗೆ 42 ರೂ.ಗೆ ಮಾರಾಟವಾಗುತ್ತಿದೆ. ಈರುಳ್ಳಿ 20 ರೂ. ಬೀನ್ಸ್ ಕೆಜಿಗೆ 65 ರೂ. ಬದನೆಕಾಯಿ 25 ರೂ, ಬೀಟ್ ರೂಟ್ 25 ರೂ. ಹಾಗಲಕಾಯಿ 42 ರೂ, ಹಸಿಮೆಣಸಿನ ಕಾಯಿ 65 ರೂ. ನುಗ್ಗೆಕಾಯಿ 45 ರೂ. ದಪ್ಪಮೆಣಸಿನ ಕಾಯಿ 80 ರೂ. ಸಾಂಬರ್ ಈರುಳ್ಳಿ 48 ರೂ. ಮೂಲಂಗಿ 28 ರೂ. ಕೊತ್ತಂಬರಿ ಸೊಪ್ಪು 60 ರೂ. ಕರಿಬೇವು 86 ರೂ.ಗೆ ಏರಿಕೆಯಾಗಿದೆ.