ಬೆಂಗಳೂರು: ಮೂರು ಮಂದಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಎಲ್ಲಾ ಸಚಿವರಿಗೆ ಖಾತೆ ಹಂಚಿಕೆಯನ್ನು ಸೋಮವಾರ ಯಡಿಯೂರಪ್ಪ ಮಾಡಿದ್ದಾರೆ.
ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಹುದ್ದೆ ಜತೆಗೆ ಕೆಲವು ಪ್ರಮುಖ ಖಾತೆ ನೀಡಲಾಗಿದೆ.
ಗೋವಿಂದ ಕಾರಜೋಳ(ಲೋಕೋಪಯೋಗಿ, ಹೆಚ್ಚುವರಿಯಾಗಿ ಸಮಾಜ ಕಲ್ಯಾಣ), ಡಾ. ಅಶ್ವತ್ಥ ನಾರಾಯಣ(ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ-ತಂತ್ರಜ್ಞಾನ) ಲಕ್ಷಣ ಸವದಿ(ಸಾರಿಗೆ), ಕೆ.ಎಸ್.ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್), ಆರ್. ಅಶೋಕ್(ಕಂದಾಯ), ಜಗದೀಶ್ ಶೆಟ್ಟರ್(ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು), ಶ್ರೀರಾಮುಲು(ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಎಸ್. ಸುರೇಶ್ ಕುಮಾರ್(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ), ವಿ.ಸೋಮಣ್ಣ(ವಸತಿ), ಸಿ.ಟಿ.ರವಿ(ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚುವರಿ), ಬಸವರಾಜ ಬೊಮ್ಮಾಯಿ(ಗೃಹ), ಕೋಟ ಶ್ರೀನಿವಾಸ ಪೂಜಾರಿ(ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ), ಜೆ.ಸಿ.ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳು, ಹೆಚ್ಚುವರಿಯಾಗಿ ಜಲಸಂಪನ್ಮೂಲ ಮತ್ತು ಸಣ್ಣ ನಿರಾವರಿ, ಸಿ.ಸಿ.ಪಾಟೀಲ(ಗಣಿ, ಭೂ ವಿಜ್ಞಾನ ಮತ್ತು ವಾಣಿಜ್ಯ), ಎಚ್. ನಾಗೇಶ್(ಅಬಕಾರಿ), ಪ್ರಭು ಚವ್ಹಾಣ್(ಪಶುಸಂಗೋಪನೆ), ಶಶಿಕಲಾ ಜೊಲ್ಲೆ(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ).